ನಟ ಶಿವರಾಜ್ಕುಮಾರ್ ಅವರು ಮಾತನಾಡಿ, ‘ಜೇಮ್ಸ್ ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್ ಸೇರಲು ಅಭಿಮಾನಿಗಳೇ ಕಾರಣ. ಚಿತ್ರಮಂದಿರಗಳ ಸಮಸ್ಯೆ ಬರುತ್ತದೆ ಹೋಗುತ್ತದೆ. ಇದೊಂದು ಕುಟುಂಬದ ರೀತಿ. ಇದನ್ನು ಬಗೆಹರಿಸುತ್ತಾ ಮುಂದುವರಿಯಬೇಕು. ಕನ್ನಡ ಸಿನಿಮಾ ಎಂಬ ವಿಚಾರ ಬಂದಾಗ ಕನ್ನಡ ಸಿನಿಮಾಗಳ ಪರವಾಗಿ ನಿಲ್ಲಿ ಎಂದು ಕೇಳಿಕೊಳ್ಳುತ್ತೇನೆ. ನಿರ್ಮಾಪಕರು ಧೈರ್ಯವಾಗಿ ನಿಲ್ಲಬೇಕು. ದೊಡ್ಮನೆ ಅಭಿಮಾನಿಗಳಷ್ಟೇ ಅಲ್ಲದೆ, ದರ್ಶನ್, ಸುದೀಪ್, ಯಶ್, ಗಣೇಶ್, ಧ್ರುವ ಹೀಗೆ ಎಲ್ಲ ಕಲಾವಿದರ ಅಭಿಮಾನಿಗಳು ಬಂದು ಜೇಮ್ಸ್ ಸಿನಿಮಾ ನೋಡಿದ್ದಾರೆ. ಇದೇ ಅಪ್ಪು ಮೇಲಿದ್ದ ಪ್ರೀತಿ, ವಿಶ್ವಾಸಕ್ಕೆ ಸಾಕ್ಷ್ಯ’ ಎಂದರು.