‘ನಾನು ನನ್ನ ತಂದೆಯನ್ನು ಕಳೆದುಕೊಂಡ ಎರಡು ವಾರಗಳ ನಂತರ ನಾನು ಸಂಸತ್ತಿನಲ್ಲಿದ್ದೆ. ಸಂಸತ್ತಿನ ಕಲಾಪಗಳ ಬಗ್ಗೆಯೂ ಏನೂ ತಿಳಿದಿರಲಿಲ್ಲ. ಕ್ರಮೇಣ ಹಿರಿಯರು ಕಲಾಪದ ಬಗ್ಗೆ ಎಲ್ಲವನ್ನೂ ಹೇಳಿಕೊಟ್ಟರು. ದುಃಖವನ್ನು ಮರೆತು ಕೆಲಸದ ಕಡೆಗೆ ಗಮನ ಹರಿಸಲು ಸಹಾಯ ಮಾಡಿದ್ದರು. ಜತೆಗೆ, ಮಂಡ್ಯದ ಜನರು ನನಗೆ ಆತ್ಮವಿಶ್ವಾಸವನ್ನು ತುಂಬಿದ್ದರು’ ಎಂದು ರಮ್ಯಾ ನೆನಪುಗಳನ್ನು ಮೆಲುಕು ಹಾಕಿದ್ದಾರೆ.