‘ಒಳ್ಳೆಯ ಕಥೆಗೊಂದು ಅದ್ಭುತ ನಟ ಬೇಕು. ಈ ದಾರಿಯಲ್ಲಿ ನನಗೆ ದೀಕ್ಷಿತ್ ಸಿಕ್ಕರು. ನನ್ನ ಕನಸಿಗಿಂತ ಚೆನ್ನಾಗಿ ಈ ಸಿನಿಮಾ ಮೂಡಿಬಂದಿದೆ. ಪಾತ್ರಗಳನ್ನು ಬರೆಯುವುದು ಸುಲಭ. ಆದರೆ ನಾಲ್ಕು ಶೇಡ್ಸ್ ನಿಭಾಯಿಸಿ, ಪಾತ್ರಕ್ಕಾಗಿ ಎಂಟು ಕೆ.ಜಿ. ತೂಕ ಇಳಿಸಿಕೊಂಡು, ಹತ್ತು ತಿಂಗಳು ಗಡ್ಡ, ಮೀಸೆ ತೆಗೆಸಿಕೊಳ್ಳದೆ, ಸಿನಿಮಾಗಾಗಿ ಎರಡು ವರ್ಷ ಮೀಸಲಿಟ್ಟಿದ್ದಾರೆ ದೀಕ್ಷಿತ್. ಇದು ಚಿತ್ರತಂಡಕ್ಕೆ ಸ್ಫೂರ್ತಿಯಾಗಿದೆ. ಸಂಗೀತ ನಿರ್ದೇಶಕ ಚೇತನ್ ಅವರಿಗೆ ಇದು ಮೊದಲನೇ ಸಿನಿಮಾ. ನನಗೆ ಇದು ಎರಡನೇ ಸಿನಿಮಾ. ಇದೊಂದು ಪ್ರೇಮಕಥೆ. ಹಾಗೆಯೇ ಎಲ್ಲರನ್ನೂ ಕಾಡುವ ಸಿನಿಮಾ. ಸುತ್ತಮುತ್ತ ನೋಡುವ ಕಥೆಗಳೇ ಈ ಸಿನಿಮಾದಲ್ಲಿದೆ. ಕೆಟಿಎಂ ಎಂದರೆ ಕೇವಲ ಬೈಕ್ ಅಲ್ಲ. ಆ ಕಥೆ ಏನು ಎಂಬುವುದನ್ನು ಸಿನಿಮಾದಲ್ಲೇ ನೋಡಬೇಕು. ಮೂರು ಹಂತದಲ್ಲಿ ಸಿನಿಮಾವಿದೆ’ ಎನ್ನುತ್ತಾರೆ ಅರುಣ್.