ಹಾಡಿನ ರಾಗವನ್ನು ತಮ್ಮ ಆಲ್ಬಂ ‘ನವರಸನ್’ನಿಂದ ನಕಲು ಮಾಡಲಾಗಿದೆ ಎಂದು ಆಕ್ಷೇಪಿಸಿ ತೈಕುಡಂ ಬ್ರಿಡ್ಜ್ ಅರ್ಜಿ ಸಲ್ಲಿಸಿತ್ತು. ಕೋಯಿಕ್ಕೋಡ್ ಮತ್ತು ಪಾಲಕ್ಕಾಡ್ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ನ್ಯಾಯಾಲಯಗಳು ವಿಧಿಸಿದ್ದ ಆಕ್ಷೇಪ ಪ್ರಶ್ನಿಸಿ ‘ಕಾಂತಾರ’ ತಂಡ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು.ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ವಿವಾದವನ್ನು ಕೆಳ ನ್ಯಾಯಾಲಯಗಳಲ್ಲೇ ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು. ಅದರಂತೆ ಇಂದು (ನ. 25) ‘ಕಾಂತಾರ’ ಚಿತ್ರತಂಡ ಮತ್ತು ತೈಕುಡಂ ಬ್ರಿಡ್ಜ್ನ ವಾದವನ್ನು ಆಲಿಸಿದ ಕೆಳ ನ್ಯಾಯಾಲಯ ಹಾಡಿಗೆ ವಿಧಿಸಿದ್ದ ತಡೆಯಾಜ್ಞೆ ತೆರವುಗೊಳಿಸಿತು.