ರಜನಿಕಾಂತ್ ನಟಿಸಿದ್ದ ‘ಪೆಟ್ಟಾ’ ಚಿತ್ರದ ಬಳಿಕ ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿರುವ ಸಿನಿಮಾ ‘ಜಗಮೆ ತಂಧಿರಾಮ್’. ಗ್ಯಾಂಗ್ಸ್ಟರ್ ಸುತ್ತ ಇದರ ಕಥೆ ಹೆಣೆಯಲಾಗಿದೆ. ತಮಿಳಿನ ಬಹುನಿರೀಕ್ಷಿತ ಈ ಚಿತ್ರದ ಬಿಡುಗಡೆಯ ಮೇಲೆ ಕೊರೊನಾದ ಕರಿನೆರಳು ಬಿದ್ದಿದೆ. ಹಾಗಾಗಿ, ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಇದಾದ ಬಳಿಕ ಕಾರ್ತಿಕ್ ಸುಬ್ಬರಾಜ್ ಯಾವ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಕುತೂಹಲ ಕಾಲಿವುಡ್ ಅಂಗಳದಲ್ಲಿತ್ತು. ಮತ್ತೆ ಅವರು ಗ್ಯಾಂಗ್ಸ್ಟರ್ ಸಿನಿಮಾ ನಿರ್ದೇಶಿಸಲು ಅಣಿಯಾಗಿದ್ದಾರೆ.