ಸುದೀಪ್ ಅವರು ನಿತ್ಯೋತ್ಸವದ ಬದಲು 'ನಿತ್ಯೊತ್ಸವ' ಎಂದು ಬರೆದಿದ್ದರು. ಇದನ್ನೇ ನೆಪಮಾಡಿಕೊಂಡು ದರ್ಶನ್ ಅಭಿಮಾನಿಗಳು ಕಿಚ್ಚನನ್ನು ಕಿಚಾಯಿಸಿದ್ದಾರೆ. ಸುದೀಪ್ಗೆ ಕನ್ನಡ ಬರಲ್ಲ, ಕನ್ನಡ ಸರಿಯಾಗಿ ಬರೇ ಮಾರಾಯ!, ಮೊದಲು ಕನ್ನಡ ಕಲಿ ಎಂದು ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಇದನ್ನು ಅರಿತ ಸುದೀಪ್ ಆ ಟ್ವೀಟ್ ಅನ್ನು ಅಳಿಸಿ ’ನಿತ್ಯೋತ್ಸವ’ ಪದವನ್ನು ಸರಿಯಾಗಿ ಬರೆದು ಮತ್ತೊಂದು ಟ್ವೀಟ್ ಮಾಡಿದರು.