‘ಬ್ರಹ್ಮರಾಕ್ಷಸನ ಬಗ್ಗೆ ಹಲವು ಅಜ್ಜಿ ಕಥೆಗಳಿವೆ. ಬ್ರಹ್ಮರಾಕ್ಷಸನನ್ನು ದೇವಾನುದೇವತೆಗಳಿಂದಲೂ ಸಂಹರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಜನರು ಬ್ರಹ್ಮರಾಕ್ಷಸ ತೊಂದರೆ ನೀಡದಿರಲೆಂದು ಆತನಿಗೆ ದೇವಸ್ಥಾನಗಳನ್ನು ನಿರ್ಮಿಸಿ ಪೂಜಿಸಲು ಶುರು ಮಾಡಿದರು. ಶೃಂಗೇರಿ, ಮಂಗಳೂರು ಹಾಗೂ ಕೇರಳದಲ್ಲಿ ಬ್ರಹ್ಮರಾಕ್ಷಸನ ದೇವಸ್ಥಾನಗಳೂ ಇವೆ. ಪುರಾಣ ಕಥೆಗಳೊಂದಿಗೆ ತಳುಕು ಹಾಕಿಕೊಂಡಿರುವಇಂತಹ ಬ್ರಹ್ಮರಾಕ್ಷಸನ ಬಗ್ಗೆ ಭಾರತೀಯ ಚಿತ್ರರಂಗದಲ್ಲಿ ಅಷ್ಟಾಗಿ ಸಿನಿಮಾ ಬಂದಿರಲಿಲ್ಲ. ಬ್ರಹ್ಮರಾಕ್ಷಸನನ್ನು ತೆರೆ ಮೇಲೆ ಪರಿಚಯಿಸಲು ಹೊರಟಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಲೋಹಿತ್.