ಆರು ಹಾಡುಗಳಿಗೆ ಬಿ.ಆರ್.ಹೇಮಂತಕುಮಾರ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ಮಧುಆರಾಧ್ಯ, ಸಾಹಸ ಸುಪ್ರೀಂಸುಬ್ಬು, ನೃತ್ಯ ಟಿ.ಕೆ.ಸತೀಶ್, ನಿರ್ಮಾಣ ನಿರ್ವಹಣೆ ಎಸ್.ಎನ್.ವೀರಣ್ಣ ಅವರದ್ದು. ಬೆಂಗಳೂರು, ಬೆಳಗಾವಿ ಮತ್ತು ಚಿಕ್ಕಮಗಳೂರು, ಸಕಲೇಶಪುರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಫ್ರೇಮ್ ಶಾಟ್ ಸ್ಟುಡಿಯೋ ಅರ್ಪಿಸುತ್ತಿರುವ ಚಿತ್ರದ ಮಹೂರ್ತ ಮೇ 17ರಂದು ನಡೆಯಲಿದೆ ಎಂದು ತಂಡವು ತಿಳಿಸಿದೆ.