ಮೇಲುಕೋಟೆ ಟೂರಿಂಗ್ ಟಾಕೀಸ್ ಸಂಸ್ಥೆಯಡಿ ಪಾರ್ವತಿ ಚಂದ್ರಶೇಖರ್, ಲೀಲಾವತಿ ಸುರೇಶ್ ಕುಮಾರ್ ಹಾಗೂ ಪ್ರೇಮ ಚಂದ್ರಯ್ಯ ನಿರ್ಮಿಸಿರುವ ‘ಮಹಿಷಾಸುರ’ ಚಿತ್ರ ಈ ವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರವನ್ನು ಉದಯ ಪ್ರಸನ್ನ ನಿರ್ದೇಶನ ಮಾಡಿದ್ದಾರೆ. ಮನುಷ್ಯ ಒಳ್ಳೆಯವನೇ ಆಗಿದ್ದರೂ ಆತ ತನ್ನ ತಾಳ್ಮೆ ಕಳೆದುಕೊಂಡರೆ ಮಹಿಷಾಸುರನಾಗುತ್ತಾನೆ ಎಂದು ಹೇಳುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಈ ಚಿತ್ರಕ್ಕೆ ಯು/ಎ ಅರ್ಹತಾ ಪ್ರಮಾಣ ಪತ್ರ ಸಿಕ್ಕಿದೆ.
ಅರ್ಜುನ, ರಾಜ್ ಮಂಜು, ಸುದರ್ಶನ್, ಬಿಂದುಶ್ರೀ ಮುಂತಾದವರ ತಾರಾಬಳಗವಿದೆ. ಚಿತ್ರಕ್ಕೆ ಕೃಷ್ಣ ಛಾಯಾಗ್ರಹಣ, ಸುನೀಲ್ ಕಾಶಿ ಸಂಗೀತ, ವೇಣು ಸಾಹಿತ್ಯವಿದೆ.