ಗ್ರಾಮೀಣ ಭಾಗದಲ್ಲಿ, ಅದರಲ್ಲೂ ಬುಡಕಟ್ಟು ಪ್ರದೇಶಗಳಲ್ಲಿನ ಮಕ್ಕಳು ಟಿ.ವಿ ಹಾಗೂ ಸ್ಮಾರ್ಟ್ಫೋನ್ ಇಲ್ಲದಿರುವುದರಿಂದ ಈ ತರಗತಿಗಳಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ಇಂತಹ ಬಡ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದಕೇರಳದಲ್ಲಿ ಈಗಾಗಲೇ ರಾಜಕೀಯ ಪಕ್ಷವೊಂದು ‘ಟಿ.ವಿ ಚಾಲೆಂಜ್’ ಅಭಿಯಾನ ಆರಂಭಿಸಿದೆ. ಬಡ ಕುಟುಂಬಗಳಿಗೆ ಟಿ.ವಿಗಳನ್ನು ಒದಗಿಸುವಂತೆ ಮಾಡುವುದು ಇದರ ಉದ್ದೇಶ. ಈ ಅಭಿಯಾನಕ್ಕೆ ನಟಿ ಮಂಜು ವಾರಿಯರ್, ನಿರ್ದೇಶಕರಾದ ಆಶಿಕ್ ಅಬು ಹಾಗೂ ಬಿ. ಉನ್ನಿಕೃಷ್ಣನ್ ಕೈ ಜೋಡಿಸಿದ್ದು, ಬಡಮಕ್ಕಳಿಗೆ ಟಿ.ವಿ ಸೆಟ್ಗಳನ್ನು ನೀಡುತ್ತಿದ್ದಾರೆ.