‘ಕ್ರೇಜಿಸ್ಟಾರ್’ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಬಣ್ಣದಲೋಕ ಪ್ರವೇಶಿಸಿದ್ದು, ‘ಸಾಹೇಬ’ನ ಅವತಾರದಲ್ಲಿ. ಬಣ್ಣದ ಜಗತ್ತಿನಲ್ಲಿ ಅವರಿಟ್ಟ ಮೊದಲ ಹೆಜ್ಜೆ ಅಷ್ಟೇನೂ ಗಟ್ಟಿಯಾಗಿರಲಿಲ್ಲ. ಬಳಿಕ ತಮ್ಮೊಳಗಿನ ನಟನೆಯ ತುಡಿತಕ್ಕೆ ಅವರು ‘ಬೃಹಸ್ಪತಿ’ಯ ವೇಷವನ್ನೂ ತೊಟ್ಟರು. ಆದರೆ, ಪ್ರೇಮಲೋಕದಲ್ಲಿ ಈ ಹೊಸ ಹೀರೊಗೆ ಗೆಲುವು ಮರೀಚಿಕೆಯಾಗಿಯೂ ಉಳಿದಿದೆ.