<p>ಥಿಯೇಟರ್ನಲ್ಲಿ ಚಿತ್ರಗಳನ್ನು ಎರಡು ವಾರದವರೆಗೆ ಗಟ್ಟಿಯಾಗಿ ನಿಲ್ಲಿಸುವುದೇ ಈಗ ಸವಾಲು. ಇಲ್ಲವಾದರೆ ಹೂಡಿದ ಬಂಡವಾಳವೂ ಮಟಾಶ್ ಆಗಲಿದೆ’</p>.<p>–ಇದು ಈಗಿನ ಕನ್ನಡ ಸಿನಿಮಾಗಳ ಪ್ರದರ್ಶನದ ಬಗ್ಗೆ ನಿರ್ದೇಶಕ ಎಸ್.ಡಿ. ಅರವಿಂದ್ ಅವರ ವ್ಯಾಖ್ಯಾನ. ‘ಲಾಸ್ಟ್ ಬಸ್’ ಚಿತ್ರದ ಬಳಿಕ ಅವರು ನಿರ್ದೇಶಿಸಿದ್ದ ‘ಮಟಾಶ್’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.</p>.<p>ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿತ್ತು. ಸರ್ಕಾರದ ಆದೇಶಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲವಂತೆ. ಆ ವೇಳೆ ಜನರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಕಾಮಿಡಿಥ್ರಿಲ್ಲರ್ ಕಥೆ ಹೆಣೆದಿದ್ದಾರಂತೆ. ಹಣ ಮನುಷ್ಯನನ್ನು ಏನೆಲ್ಲಾ ಮಾಡುತ್ತದೆ ಎನ್ನುವುದರ ಸುತ್ತ ಕಥೆ ಸಾಗಲಿದೆ.</p>.<p>‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಉತ್ತರ ಕರ್ನಾಟಕದ ಜವಾರಿ ಶೈಲಿಯ ಹಾಡೊಂದಕ್ಕೆ ಕಂಠದಾನ ಮಾಡಿದ್ದಾರೆ. ಈ ಹಾಡು ಸಾಕಷ್ಟು ಹವಾ ಎಬ್ಬಿಸಿದೆಯಂತೆ.</p>.<p>‘ಚಿತ್ರದಲ್ಲಿರುವ ಎಲ್ಲರೂ ಹೊಸಬರು. ಕನ್ನಡ ಚಿತ್ರಗಳ ಪ್ರದರ್ಶನದ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾನು ಬಿಡಿಸಿ ಹೇಳುವ ಅಗತ್ಯವಿಲ್ಲ. ಎರಡು ವಾರಗಳ ಕಾಲ ಥಿಯೇಟರ್ಗಳಲ್ಲಿ ಸಿನಿಮಾ ನಿಲ್ಲಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಿದ್ದೇವೆ’ ಎಂದರು ಅರವಿಂದ್.</p>.<p>ಚಿತ್ರದಲ್ಲಿ ಏಳು ಹಾಡುಗಳಿವೆ. ರಜನಿ ಭಾರದ್ವಾಜ್, ಐಶ್ವರ್ಯ ಸಿಂಧೋಗಿ, ಅಮೋಘ್ ರಾಹುಲ್, ಸಮರ್ಥ್ ನರಸಿಂಹರಾಜು, ಗೌತಮ್, ವಿ. ಮಹೋಹರ್, ಬಾಲಾಜಿ ಶೆಟ್ಟಿ, ನಂದ ತಾರಾಗಣದಲ್ಲಿದ್ದಾರೆ.</p>.<p>ಸತೀಶ್ ಪಾಟಕ್ ಮತ್ತು ಗಿರೀಶ್ ಪಾಟೀಲ್ ಬಂಡವಾಳ ಹೂಡಿದ್ದಾರೆ. ರಾಮಿ ಅಬ್ರಹಾಂ ಅವರ ಛಾಯಾಗ್ರಹಣವಿದೆ.</p>.<p>⇒v</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಥಿಯೇಟರ್ನಲ್ಲಿ ಚಿತ್ರಗಳನ್ನು ಎರಡು ವಾರದವರೆಗೆ ಗಟ್ಟಿಯಾಗಿ ನಿಲ್ಲಿಸುವುದೇ ಈಗ ಸವಾಲು. ಇಲ್ಲವಾದರೆ ಹೂಡಿದ ಬಂಡವಾಳವೂ ಮಟಾಶ್ ಆಗಲಿದೆ’</p>.<p>–ಇದು ಈಗಿನ ಕನ್ನಡ ಸಿನಿಮಾಗಳ ಪ್ರದರ್ಶನದ ಬಗ್ಗೆ ನಿರ್ದೇಶಕ ಎಸ್.ಡಿ. ಅರವಿಂದ್ ಅವರ ವ್ಯಾಖ್ಯಾನ. ‘ಲಾಸ್ಟ್ ಬಸ್’ ಚಿತ್ರದ ಬಳಿಕ ಅವರು ನಿರ್ದೇಶಿಸಿದ್ದ ‘ಮಟಾಶ್’ ಚಿತ್ರ ಈ ಶುಕ್ರವಾರ ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.</p>.<p>ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿತ್ತು. ಸರ್ಕಾರದ ಆದೇಶಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲವಂತೆ. ಆ ವೇಳೆ ಜನರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಕಾಮಿಡಿಥ್ರಿಲ್ಲರ್ ಕಥೆ ಹೆಣೆದಿದ್ದಾರಂತೆ. ಹಣ ಮನುಷ್ಯನನ್ನು ಏನೆಲ್ಲಾ ಮಾಡುತ್ತದೆ ಎನ್ನುವುದರ ಸುತ್ತ ಕಥೆ ಸಾಗಲಿದೆ.</p>.<p>‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಉತ್ತರ ಕರ್ನಾಟಕದ ಜವಾರಿ ಶೈಲಿಯ ಹಾಡೊಂದಕ್ಕೆ ಕಂಠದಾನ ಮಾಡಿದ್ದಾರೆ. ಈ ಹಾಡು ಸಾಕಷ್ಟು ಹವಾ ಎಬ್ಬಿಸಿದೆಯಂತೆ.</p>.<p>‘ಚಿತ್ರದಲ್ಲಿರುವ ಎಲ್ಲರೂ ಹೊಸಬರು. ಕನ್ನಡ ಚಿತ್ರಗಳ ಪ್ರದರ್ಶನದ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾನು ಬಿಡಿಸಿ ಹೇಳುವ ಅಗತ್ಯವಿಲ್ಲ. ಎರಡು ವಾರಗಳ ಕಾಲ ಥಿಯೇಟರ್ಗಳಲ್ಲಿ ಸಿನಿಮಾ ನಿಲ್ಲಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಿದ್ದೇವೆ’ ಎಂದರು ಅರವಿಂದ್.</p>.<p>ಚಿತ್ರದಲ್ಲಿ ಏಳು ಹಾಡುಗಳಿವೆ. ರಜನಿ ಭಾರದ್ವಾಜ್, ಐಶ್ವರ್ಯ ಸಿಂಧೋಗಿ, ಅಮೋಘ್ ರಾಹುಲ್, ಸಮರ್ಥ್ ನರಸಿಂಹರಾಜು, ಗೌತಮ್, ವಿ. ಮಹೋಹರ್, ಬಾಲಾಜಿ ಶೆಟ್ಟಿ, ನಂದ ತಾರಾಗಣದಲ್ಲಿದ್ದಾರೆ.</p>.<p>ಸತೀಶ್ ಪಾಟಕ್ ಮತ್ತು ಗಿರೀಶ್ ಪಾಟೀಲ್ ಬಂಡವಾಳ ಹೂಡಿದ್ದಾರೆ. ರಾಮಿ ಅಬ್ರಹಾಂ ಅವರ ಛಾಯಾಗ್ರಹಣವಿದೆ.</p>.<p>⇒v</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>