ಗಾಂಧಿ ಜಯಂತಿಯಂದು ಚಿತ್ರದ ಮುಹೂರ್ತ ನಡೆದಿದೆ. ಈ ಚಿತ್ರವನ್ನು ನಿರ್ಮಿಸಿದವರು ಜಿ.ವೈ.ಪದ್ಮ. ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ ಅವರದ್ದು. ಜೆ.ಎಂ. ಪ್ರಹ್ಲಾದ ಅವರು ಚಿತ್ರಕತೆ- ಸಂಭಾಷಣೆ ಬರೆದಿದ್ದು, ಮಂಜು ಪಾಂಡುಪುರ ಇದನ್ನು ನಿರ್ದೇಶಿಸಿದ್ದಾರೆ. ಈ ದಲಿತ ಆತ್ಮಕತೆಯ ಪ್ರಧಾನ ಪಾತ್ರದಲ್ಲಿ ನಾಟಕಕಾರ ಡಾ.ಡಿ.ಎಸ್.ಚೌಗಲೆ ಮತ್ತು ರಂಗಭೂಮಿ, ಚಲನಚಿತ್ರ ಕಲಾವಿದೆ ಹನುಮಕ್ಕ ಡಿ.ಮರಿಯಮ್ಮನಹಳ್ಳಿ ಅವರು ಅಭಿನಯಿಸುತ್ತಿದ್ದಾರೆ.