ಹುಬ್ಬಳ್ಳಿ: 'ಮಿಟೂ ಒಳ್ಳೆಯ ಅಭಿಯಾನವಾಗಿದ್ದು, ದೌರ್ಜನ್ಯಕ್ಕೆ ಒಳಗಾಗಿರುವ ಎಲ್ಲರೂ ಧ್ವನಿ ಎತ್ತಬೇಕು. ಆದರೆ ಇದನ್ನು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ' ಎಂದು ನಟಿ ರಾಗಿಣಿಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 'ನನಗೆ ಅಂತಹ ಯಾವುದೇ ಕೆಟ್ಟ ಅನುಭವವಾಗಿಲ್ಲ. ಒತ್ತಡ ಸೇರಿದಂತೆ ಹಲವು ಕಾರಣಗಳಿಗಾಗಿ ಅಂತಹ ಘಟನೆಗಳು ನಡೆಯುತ್ತವೆ. ಪುರುಷ- ಮಹಿಳೆ ಭೇದ ಇಲ್ಲದೆ ಎಲ್ಲರೂ ಇದರ ವಿರುದ್ಧ ಧ್ವನಿ ಎತ್ತಬಹುದು' ಎಂದರು.