ಟ್ರೈಲರ್ ಹೀಗಿದೆ: ಭೂಗತ ಜಗತ್ತಿನ ನಾಯಕ ಕಲೀನ್ ಭೈಯ್ಯಾ ಮಿರ್ಜಾಪುರದ ಜನರಿಗೆ ನಿಯಮಗಳನ್ನು ಹೇಳುತ್ತಾನೆ. ಅವನ ಪುತ್ರ ಮುನ್ನಾ ಕೂಡಾ ಇನ್ನೊಂದಿಷ್ಟು ಅವನದೇ ಆದ ನಿಯಮಗಳನ್ನೂ ಸೇರಿಸುತ್ತಾನೆ.
ಇದೇ ವೇಳೆ ಗುಡ್ಡು ಪಂಡಿತ್ಗೆ ತನ್ನ ಸಹೋದರಹಾಗೂ ಅವನ ಪತ್ನಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಎಂಬ ಉದ್ದೇಶವಿರುತ್ತದೆ. ಆದರೆ ಗುಡ್ಡು ಪಂಡಿತ್ ಉದ್ದೇಶವೂ ಮಿರ್ಜಾಪುರವನ್ನು ತಾನು ಆಳಬೇಕು ಎಂಬುದೇ ಆಗಿರುತ್ತದೆ.
ಈ ‘ಸಿಂಹಾಸನ’ಕ್ಕಾಗಿ ನಡೆಯುವ ರೇಸ್ಗೆ ಕಲೀನ್ ಭೈಯ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು ಎಂದು ಕಾದಿರುವ ಪಾತ್ರದಲ್ಲಿ ರತಿ ಶಂಕರ್ ಪಾಂಡೆ ಅವರ ಪುತ್ರ ಶರದ್ ಶುಕ್ಲಾ ಕಾಣಿಸಿಕೊಂಡಿದ್ದಾರೆ. ಕೊನೆಗೆ ಯಾರು, ಹೇಗೆ ಗೆಲ್ಲುತ್ತಾರೆ ಎಂಬುದೇ ಕುತೂಹಲದ ವಿಷಯ.
ಎರಡನೇ ಆವೃತ್ತಿಯ ಕಥಾವಸ್ತು ಗಟ್ಟಿಯಾಗಿದೆ. ಆಕ್ಷನ್,ಸಾಕಷ್ಟು ರಕ್ತಸಿಕ್ತ ದೃಶ್ಯಗಳನ್ನೂ ಒಳಗೊಂಡಿದೆ.