<p><strong>ಹೈದರಾಬಾದ್:</strong> 6 ತಿಂಗಳ ಹಿಂದೆ ಸೈಬರ್ ವಂಚಕರು ತಮ್ಮ ಕುಟುಂಬದ ಓರ್ವ ಸದಸ್ಯರನ್ನು ಎರಡು ದಿನಗಳ ಕಾಲ ‘ಡಿಜಿಟಲ್ ಬಂಧನಕ್ಕೆ’ ಒಳಪಡಿಸಿದ್ದರು ಎಂದು ನಟ ನಾಗಾರ್ಜುನ ಅಕ್ಕಿನೇನಿ ಸೋಮವಾರ ಹೇಳಿದ್ದಾರೆ.</p><p>ನಗರ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಜೊತೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ನಾಗರ್ಜುನ, ಪೊಲೀಸರ ಮಧ್ಯಪ್ರವೇಶದ ಬಳಿಕ ದುಷ್ಕರ್ಮಿಗಳು ಮಾಯವಾದರು ಎಂದು ಹೇಳಿದರು.</p><p>‘ನನ್ನ ಸ್ವಂತ ಮನೆಯಲ್ಲಿ ಸುಮಾರು 6 ತಿಂಗಳ ಹಿಂದೆ ಒಂದು ಘಟನೆ ನಡೆದಿರುವುದು ನನಗೆ ನೆನಪಿದೆ. ನನ್ನ ಕುಟುಂಬದ ಸದಸ್ಯರಲ್ಲಿ ಒಬ್ಬರನ್ನು ಎರಡು ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿ ಇಡಲಾಗಿತ್ತು. ವಂಚಕರು ನಮ್ಮನ್ನು ಟ್ರ್ಯಾಪ್ ಮಾಡಿ, ನಮ್ಮ ದೌರ್ಬಲ್ಯಗಳನ್ನು ಗುರುತಿಸಿ ನಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಾರೆ’ ಎಂದರು</p><p>ಹಿರಿಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದ ಬಳಿಕ ಘಟನೆ ಇತ್ಯರ್ಥಗೊಂಡಿತು. ಹಾಗಾಗಿ, ಯಾವುದೇ ದೂರು ದಾಖಲಿಸಿಲ್ಲ ಎಂದು ಪಿಟಿಐಗೆ ತಿಳಿಸಿದ್ದಾರೆ.</p><p>ಪೈರೇಟೆಡ್ ಚಲನಚಿತ್ರಗಳನ್ನು ಪ್ರದರ್ಶಿಸುವ ವೆಬ್ಸೈಟ್ಗಳನ್ನು ನಡೆಸುತ್ತಿರುವ ಎಮ್ಮಡಿ ರವಿ ಎಂಬಾತನ ಬಂಧನದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದರು.</p><p>‘ವಂಚನೆಯ ವೆಬ್ಸೈಟ್ಗಳ ಬಗ್ಗೆ ಜನರು ಎಚ್ಚರದಿಂದಿರಬೇಕು. ತೆಲಂಗಾಣ ಪೊಲೀಸರು ಆರೋಪಿಗಳನ್ನು ಬಂಧಿಸಿ ಉತ್ತಮ ಕೆಲಸ ಮಾಡಿದ್ದಾರೆ. ಈ ರೀತಿ ಪೈರೇಟ್ ಮಾಡುವವರನ್ನು ಬಂಧಿಸುವುದರಿಂದ ತೆಲುಗು ಚಲನಚಿತ್ರೋದ್ಯಮ ಮಾತ್ರವಲ್ಲ, ಇತರೆ ಭಾಷೆಯ ಚಲನಚಿತ್ರಗಳು ಸಹ ಪ್ರಯೋಜನ ಪಡೆಯುತ್ತವೆ’ ಎಂದು ಅವರು ಹೇಳಿದರು.</p>.ನಾಗಚೈತನ್ಯ ವಿವಾಹದ ಬೆನ್ನಲ್ಲೇ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ: ನಟ ನಾಗಾರ್ಜುನ.ಸೈಬರ್ ವಂಚನೆ: ‘ಗೋಲ್ಡನ್ ಅವರ್’ ಕೈಚೆಲ್ಲಿದರೆ ಪತ್ತೆಯೇ ಸವಾಲು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> 6 ತಿಂಗಳ ಹಿಂದೆ ಸೈಬರ್ ವಂಚಕರು ತಮ್ಮ ಕುಟುಂಬದ ಓರ್ವ ಸದಸ್ಯರನ್ನು ಎರಡು ದಿನಗಳ ಕಾಲ ‘ಡಿಜಿಟಲ್ ಬಂಧನಕ್ಕೆ’ ಒಳಪಡಿಸಿದ್ದರು ಎಂದು ನಟ ನಾಗಾರ್ಜುನ ಅಕ್ಕಿನೇನಿ ಸೋಮವಾರ ಹೇಳಿದ್ದಾರೆ.</p><p>ನಗರ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಜೊತೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ನಾಗರ್ಜುನ, ಪೊಲೀಸರ ಮಧ್ಯಪ್ರವೇಶದ ಬಳಿಕ ದುಷ್ಕರ್ಮಿಗಳು ಮಾಯವಾದರು ಎಂದು ಹೇಳಿದರು.</p><p>‘ನನ್ನ ಸ್ವಂತ ಮನೆಯಲ್ಲಿ ಸುಮಾರು 6 ತಿಂಗಳ ಹಿಂದೆ ಒಂದು ಘಟನೆ ನಡೆದಿರುವುದು ನನಗೆ ನೆನಪಿದೆ. ನನ್ನ ಕುಟುಂಬದ ಸದಸ್ಯರಲ್ಲಿ ಒಬ್ಬರನ್ನು ಎರಡು ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿ ಇಡಲಾಗಿತ್ತು. ವಂಚಕರು ನಮ್ಮನ್ನು ಟ್ರ್ಯಾಪ್ ಮಾಡಿ, ನಮ್ಮ ದೌರ್ಬಲ್ಯಗಳನ್ನು ಗುರುತಿಸಿ ನಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಾರೆ’ ಎಂದರು</p><p>ಹಿರಿಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದ ಬಳಿಕ ಘಟನೆ ಇತ್ಯರ್ಥಗೊಂಡಿತು. ಹಾಗಾಗಿ, ಯಾವುದೇ ದೂರು ದಾಖಲಿಸಿಲ್ಲ ಎಂದು ಪಿಟಿಐಗೆ ತಿಳಿಸಿದ್ದಾರೆ.</p><p>ಪೈರೇಟೆಡ್ ಚಲನಚಿತ್ರಗಳನ್ನು ಪ್ರದರ್ಶಿಸುವ ವೆಬ್ಸೈಟ್ಗಳನ್ನು ನಡೆಸುತ್ತಿರುವ ಎಮ್ಮಡಿ ರವಿ ಎಂಬಾತನ ಬಂಧನದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದರು.</p><p>‘ವಂಚನೆಯ ವೆಬ್ಸೈಟ್ಗಳ ಬಗ್ಗೆ ಜನರು ಎಚ್ಚರದಿಂದಿರಬೇಕು. ತೆಲಂಗಾಣ ಪೊಲೀಸರು ಆರೋಪಿಗಳನ್ನು ಬಂಧಿಸಿ ಉತ್ತಮ ಕೆಲಸ ಮಾಡಿದ್ದಾರೆ. ಈ ರೀತಿ ಪೈರೇಟ್ ಮಾಡುವವರನ್ನು ಬಂಧಿಸುವುದರಿಂದ ತೆಲುಗು ಚಲನಚಿತ್ರೋದ್ಯಮ ಮಾತ್ರವಲ್ಲ, ಇತರೆ ಭಾಷೆಯ ಚಲನಚಿತ್ರಗಳು ಸಹ ಪ್ರಯೋಜನ ಪಡೆಯುತ್ತವೆ’ ಎಂದು ಅವರು ಹೇಳಿದರು.</p>.ನಾಗಚೈತನ್ಯ ವಿವಾಹದ ಬೆನ್ನಲ್ಲೇ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥ: ನಟ ನಾಗಾರ್ಜುನ.ಸೈಬರ್ ವಂಚನೆ: ‘ಗೋಲ್ಡನ್ ಅವರ್’ ಕೈಚೆಲ್ಲಿದರೆ ಪತ್ತೆಯೇ ಸವಾಲು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>