<p>ದೇಶ 75ನೇ ಸ್ವಾತಂತ್ರ್ಯೋತ್ಸವದಲ್ಲಿರುವ ಸಂದರ್ಭದಲ್ಲಿ ಗಾಂಧೀಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕಿರುಚಿತ್ರ ‘ನಮೋ ಗಾಂಧಿ’ ಬಿಡುಗಡೆಯಾಗಿದೆ.</p>.<p>ರಂಗಭೂಮಿಯಲ್ಲಿ ಸಕ್ರಿಯರಾಗಿರುವ, ಟಿವಿ ರಿಯಾಲಿಟಿ ಷೋಗಳ ನಿರ್ಮಾಪಕಎಸ್.ಎಲ್.ಎನ್ ಸ್ವಾಮಿ ನಿರ್ದೇಶನದ ಚಿತ್ರವಿದು. 24 ಗಂಟೆಗಳಲ್ಲಿ ನಿರ್ಮಾಣವಾಗಿದೆ ಎಂಬುದು ಚಿತ್ರದ ಹೆಗ್ಗಳಿಕೆ.</p>.<p>ಗಾಂಧೀಜಿಯವರ ತತ್ವಗಳಿಂದ ಪ್ರೇರೇಪಿತಳಾದ ಬಾಲಕಿಯೊಬ್ಬಳು, ತಾನು ಕಂಡ ಅನ್ಯಾಯ, ಅಕ್ರಮಗಳನ್ನು ಗಾಂಧಿ ಪಾತ್ರದ ಪ್ರಭಾವದ ಹಿನ್ನೆಲೆಯಲ್ಲಿ ಹೇಗೆ ಬದಲಿಸುತ್ತಾಳೆ ಎಂಬುದೇ ಕಿರುಚಿತ್ರದ ಕಥಾವಸ್ತು.</p>.<p>ಪುಟಾಣಿ ಪ್ರತಿಭೆ ಸಾಕ್ಷಿ, ಶ್ವೇತ ಶ್ರೀನಿವಾಸ್, ಟೈಗರ್ ಗಂಗ, ಸಿಂಹಾದ್ರಿ ಇದರಲ್ಲಿ ನಟಿಸಿದ್ದಾರೆ.<br />ಟ್ರಯೋ ಅಪರೇಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶೇಷಶಯನಂ ಈ ಕಿರುಚಿತ್ರದ ನಿರ್ಮಾಪಕರು. ರಮೇಶ್ಚಂದ್ರ ಹಾಗೂ ಸುರೇಖ ಹೆಗ್ಡೆ ಅವರ ಗಾಯನವಿದೆ.</p>.<p>ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಸುಲಭ. ಆದರೆ ಹತ್ತಿರ ಹತ್ತಿರ ಹೋಗುತ್ತಿದಂತೆ ಅವರ ಬಗ್ಗೆ ತಿಳಿಸುಕೊಳ್ಳುವುದು ಅಷ್ಟೇ ಜಟಿಲ. ಅರ್ಥ ಮಾಡಿಕೊಂಡರೆ ಸುಲಭ.ಗಾಂಧಿ ತತ್ವಗಳಿಂದ ಸಮಾಜದ ಅನ್ಯಾಯಗಳನ್ನು ಸರಿ ಪಡಿಸುವ ಕಿರುಪಯತ್ನವನ್ನು ಈ ಕಿರುಚಿತ್ರದ ಮೂಲಕ ಹೇಳ ಹೊರಟಿದ್ದೇನೆ ಎಂದರು ಎಸ್.ಎಲ್.ಎನ್. ಸ್ವಾಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶ 75ನೇ ಸ್ವಾತಂತ್ರ್ಯೋತ್ಸವದಲ್ಲಿರುವ ಸಂದರ್ಭದಲ್ಲಿ ಗಾಂಧೀಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕಿರುಚಿತ್ರ ‘ನಮೋ ಗಾಂಧಿ’ ಬಿಡುಗಡೆಯಾಗಿದೆ.</p>.<p>ರಂಗಭೂಮಿಯಲ್ಲಿ ಸಕ್ರಿಯರಾಗಿರುವ, ಟಿವಿ ರಿಯಾಲಿಟಿ ಷೋಗಳ ನಿರ್ಮಾಪಕಎಸ್.ಎಲ್.ಎನ್ ಸ್ವಾಮಿ ನಿರ್ದೇಶನದ ಚಿತ್ರವಿದು. 24 ಗಂಟೆಗಳಲ್ಲಿ ನಿರ್ಮಾಣವಾಗಿದೆ ಎಂಬುದು ಚಿತ್ರದ ಹೆಗ್ಗಳಿಕೆ.</p>.<p>ಗಾಂಧೀಜಿಯವರ ತತ್ವಗಳಿಂದ ಪ್ರೇರೇಪಿತಳಾದ ಬಾಲಕಿಯೊಬ್ಬಳು, ತಾನು ಕಂಡ ಅನ್ಯಾಯ, ಅಕ್ರಮಗಳನ್ನು ಗಾಂಧಿ ಪಾತ್ರದ ಪ್ರಭಾವದ ಹಿನ್ನೆಲೆಯಲ್ಲಿ ಹೇಗೆ ಬದಲಿಸುತ್ತಾಳೆ ಎಂಬುದೇ ಕಿರುಚಿತ್ರದ ಕಥಾವಸ್ತು.</p>.<p>ಪುಟಾಣಿ ಪ್ರತಿಭೆ ಸಾಕ್ಷಿ, ಶ್ವೇತ ಶ್ರೀನಿವಾಸ್, ಟೈಗರ್ ಗಂಗ, ಸಿಂಹಾದ್ರಿ ಇದರಲ್ಲಿ ನಟಿಸಿದ್ದಾರೆ.<br />ಟ್ರಯೋ ಅಪರೇಲ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶೇಷಶಯನಂ ಈ ಕಿರುಚಿತ್ರದ ನಿರ್ಮಾಪಕರು. ರಮೇಶ್ಚಂದ್ರ ಹಾಗೂ ಸುರೇಖ ಹೆಗ್ಡೆ ಅವರ ಗಾಯನವಿದೆ.</p>.<p>ಗಾಂಧೀಜಿ ಅವರನ್ನು ಅರ್ಥ ಮಾಡಿಕೊಳ್ಳುವುದು ಮೇಲ್ನೋಟಕ್ಕೆ ಸುಲಭ. ಆದರೆ ಹತ್ತಿರ ಹತ್ತಿರ ಹೋಗುತ್ತಿದಂತೆ ಅವರ ಬಗ್ಗೆ ತಿಳಿಸುಕೊಳ್ಳುವುದು ಅಷ್ಟೇ ಜಟಿಲ. ಅರ್ಥ ಮಾಡಿಕೊಂಡರೆ ಸುಲಭ.ಗಾಂಧಿ ತತ್ವಗಳಿಂದ ಸಮಾಜದ ಅನ್ಯಾಯಗಳನ್ನು ಸರಿ ಪಡಿಸುವ ಕಿರುಪಯತ್ನವನ್ನು ಈ ಕಿರುಚಿತ್ರದ ಮೂಲಕ ಹೇಳ ಹೊರಟಿದ್ದೇನೆ ಎಂದರು ಎಸ್.ಎಲ್.ಎನ್. ಸ್ವಾಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>