ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ಚರಿತ್ರೆಯಘಟನೆಗಳನ್ನು ಚಿತ್ರದ ನಿರ್ದೇಶಕರು ತಮಗೆ ಬೇಕಾದಂತೆ ತಿರುಚಿದ್ದಾರೆ. ಶಿವಾಜಿ ಮಹಾರಾಜರ ಕತ್ತಿಯು ಮಹಿಳೆಯರ ಮುಖ ಪರದೆಯನ್ನು ರಕ್ಷಿಸಲು ಇದೆ ಎಂಬ ಸಂಭಾಷಣೆ ಇದೆ. ಈ ರೀತಿಯ ಸಂಭಾಷಣೆಗಳು ನಿರ್ದೇಶಕರ ಮನಸ್ಥತಿಯನ್ನು ಎತ್ತಿ ಹಿಡಿಯುತ್ತವೆ. ಯಾವುದೇ ಮಹಿಳೆ ಮುಖ ಪರದೆ ಹೊದ್ದು ಬದುಕುವುದು ಶಿವಾಜಿ ಮಹಾರಾಜರಿಗೆ ಇಷ್ಟವಿರಲಿಲ್ಲ. ತಮ್ಮ ತಾಯಿಯನ್ನು ಸತಿ ಸಹಗಮನದಿಂದ ಅವರು ದೂರವಿರಿಸಿದರು. ಮಹಿಳೆಯರಿಗೆ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ಶಿವಾಜಿ ಮಹಾರಾಜರು ಭಾರತ ಇತಿಹಾಸದ ಅತ್ಯಂತ ಪ್ರಗತಿಪರ ಸಾಮ್ರಾಟ,’ ಎಂದು ಎನ್ಸಿಪಿ ಮುಖಂಡ ಹೇಳಿದ್ದಾರೆ.