‘ಯಜಮಾನ’, ‘ಅಮರ್’, ‘ಸೈರಾ ನರಸಿಂಹ ರೆಡ್ಡಿ’, ‘ಕಾಳಿದಾಸ ಕನ್ನಡ ಮೇಸ್ಟ್ರು’, ‘ನನ್ನ ಪ್ರಕಾರ’ ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಣೆ ಮಾಡಿದ ಚಿತ್ರ ವಿತರಕ ಈ ದೀಪಕ್ ಗಂಗಾಧರ್. ಕೃಷ್ಣ ನಟನೆಯ ಚಿತ್ರದ ಮೂಲಕ ದೀಪಕ್ ನಿರ್ದೇಶಕನ ಟೊಪ್ಪಿ ಧರಿಸಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ಮದನ್ ಕುಮಾರ್ ಮತ್ತು ಲಕ್ಷ್ಮಿ ನಾರಾಯಣ ರಾಜು ಅರಸ್ ಬಂಡವಾಳ ಹೂಡುತ್ತಿದ್ದಾರೆ.