ಸುದೀಪ್ ಅವರ ಸಾಮಾಜಿಕ ಜಾಲತಾಣಗಳ ಪುಟದಲ್ಲೂ ಈ ಲೈವ್ ಕಾರ್ಯಕ್ರಮ ನೋಡಬಹುದಾಗಿದೆ. ಸಿನಿಮಾ ಶೀರ್ಷಿಕೆಯ ಬದಲಾವಣೆಯ ಕಾರಣವನ್ನು ಜನವರಿ 24 ರಂದು ಬಹಿರಂಗ ಪಡಿಸಲಿದ್ದಾರೆ ಅನೂಪ್. ವಿಕ್ರಾಂತ್ ರೋಣವನ್ನು ಶಾಲಿನಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್, ಸಿದ್ದು ಮೂಲಿಮನಿ ಸೇರಿದಂತೆ ಖ್ಯಾತ ನಟ, ನಟಿಯರು ಬಣ್ಣ ಹಚ್ಚಿದ್ದಾರೆ. ಹೈದರಾಬಾದ್ ಹಾಗೂ ಕೇರಳದಲ್ಲಿ ಸಿನಿಮಾದ ಶೂಟಿಂಗ್ ನಡೆದಿತ್ತು. ಸಿನಿಮಾದ ಕೆಲವು ಹಾಡಿನ ಭಾಗದ ಶೂಟಿಂಗ್ ಮಾತ್ರ ಬಾಕಿಯಿದೆ.