ಕಡೂರು, ಚಿಕ್ಕಮಗಳೂರು, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ 35 ದಿನಗಳ ಕಾಲ ಶೂಟಿಂಗ್ ನಡೆದಿದೆ. ಶಾರದೆ, ನಾಡು ನುಡಿ, ತಾಯಿ ಹಾಗೂ ರಾಜ್ಯೋತ್ಸವ ಕುರಿತ ನಾಲ್ಕು ಹಾಡುಗಳು ಇವೆ. ವಿಜಯಪ್ರಕಾಶ್, ವಾಸುಕಿವೈಭವ್, ಅನುರಾಧಾಭಟ್ ಗೀತೆಗಳಿಗೆ ಧ್ವನಿಯಾಗಿದ್ದಾರೆಂದು ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಸಾಯಿಸರ್ವೇಶ್ ಹೇಳಿದರು.