ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಪುನೀತ್, ‘ಶನಿವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನಾವು ಮಾತುಕತೆ ನಡೆಸಿದೆವು. ನಮ್ಮ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಮುಂದೆ ಹೇಳಿದೆವು. ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿದ್ದ ಕಾರಣ ಹೆಚ್ಚಿನ ಗೊಂದಲ ಹಾಗೂ ಸಮಸ್ಯೆಯಾಗಿದೆ ಎಂದು ನಾವು ವಿವರಿಸಿದೆವು. ನಮ್ಮ ಮಾತಿಗೆ ಗೌರವ ಕೊಟ್ಟು, ಕಾಲಾವಕಾಶ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ನಟರೂ ನಮ್ಮ ಬೆನ್ನಿಗೆ ನಿಂತರು. ಎಲ್ಲರಿಗೂ ಧನ್ಯವಾದ’ ಎಂದರು.