ಬೆಂಗಳೂರು: ಟಾಲಿವುಡ್ ಜನಪ್ರಿಯ ನಟ ಅಲ್ಲು ಅರ್ಜುನ್ ಹೈದರಾಬಾದಿನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಕಟ್ಟಿದ್ದಾರೆ.
ಅಲ್ಲು ಅರ್ಜುನ್ ಅವರು ಗುರುವಾರ ಪೊಲೀಸರಿಗೆ ₹ 700 ದಂಡ ಕಟ್ಟಿದ್ದಾರೆ ಎಂದು ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅಲ್ಲು ಅರ್ಜುನ್ರೇಂಜ್ ರೋವರ್ ಕಾರಿನಲ್ಲಿ ಹೈದರಾಬಾದಿನಲ್ಲಿ ರೌಂಡ್ಸ್ ಹೊಡೆದಿದ್ದರು. ಈ ಸಂದರ್ಭದಲ್ಲಿ ಅವರುಕಾರಿಗೆ ಟಿಂಟ್ ಗ್ಲಾಸ್ ಬಳಕೆ ಮಾಡಿದ್ದರು. ಅಲ್ಲು ಅರ್ಜುನ್ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸರು ₹ 700 ದಂಡ ಹಾಕಿದ್ದರು.
ಇಂದು ಅಲ್ಲು ಅರ್ಜುನ್ ತಮ್ಮ ಮ್ಯಾನೇಜರ್ ಮೂಲಕ ದಂಡ ಪಾವತಿಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲು ಅರ್ಜುನ್ ಕಾನೂನಿಗೆ ಗೌರವ ಕೊಟ್ಟಿದ್ದಾರೆ ಎಂದು ಅವರಅಭಿಮಾನಿಗಳು ಮೆಚ್ಚುಗೆಸೂಚಿಸಿದ್ದಾರೆ.
ಎಷ್ಟೇ ದೊಡ್ಡ ಸೆಲೆಬ್ರಿಟಿಗಳಾದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ಅಲಾ ವೈಕುಂಟಪುರಮುಲೋ ಸಿನಿಮಾದ ಯಶಸ್ಸು ಅಲ್ಲು ಅರ್ಜುನ್ ನಟನಾ ಪಯಣಕ್ಕೆ ಮೈಲುಗಲ್ಲು ಹಾಕಿತು. ನಂತರ ಬಂದ ‘ಪುಷ್ಪ‘ ಸಿನಿಮಾ ಅವರನ್ನು ಟಾಲಿವುಡ್ನಲ್ಲಿ ನಂಬರ್ 1 ಸ್ಥಾನಕ್ಕೆ ಏರಿಸಿದೆ.