‘ಬಾಲಕ ಕೆವಿನ್ ವಿಚಾರ ನನಗೆ ನನ್ನ ಸಂಬಂಧಿಕರಿಂದ ಗೊತ್ತಾಯಿತು. ರಜನಿಕಾಂತ್ ಅವರು ನಮಗೆ ಸಂಬಂಧಿ ಕೂಡ ಹೌದು. ಹಾಗಾಗಿ, ಬಾಲಕನ ಆಸೆ ಈಡೇರಿಸೋಣ ಎಂದು ನಾನು ರಜನಿಕಾಂತ್ ಅವರಿಗೆ ಕರೆ ಮಾಡಿ, ವಿಷಯ ತಿಳಿಸಿದೆ. ಅವರು ನನ್ನ ಮಾತಿಗೆ ಸ್ಪಂದಿಸಿ, ಬಾಲಕನಿಗೆ ಕರೆ ಮಾಡಿದ್ದರು’ ಎಂದು ಸಿಂಧ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.