<p><strong>ಬೆಂಗಳೂರು</strong>: ‘ಸಿನಿಮಾ ಸಂಸ್ಕೃತಿ, ಅಭಿರುಚಿ ಎಲ್ಲೆಡೆ ಬೆಳೆಯಲು ಚಿತ್ರೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಬೇಕು’ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಆಗ್ರಹಿಸಿದರು. </p>.<p>17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಶುಕ್ರವಾರ ನಡೆದ ‘ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಛಾಯಾಚಿತ್ರಗ್ರಾಹಕ ಎಸ್.ರಾಮಚಂದ್ರ ಸಿನಿಪಯಣದ ಸುವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. </p>.<p>‘ಕನ್ನಡ ಚಿತ್ರರಂಗದ ಪ್ರಸ್ತುತ ಸ್ಥಿತಿಗೆ ಪಾರ್ವತಮ್ಮ ರಾಜ್ಕುಮಾರ್ ಅವರಂಥ ನಾಯಕತ್ವದ ಕೊರತೆಯೇ ಕಾರಣ. ಚಿತ್ರರಂಗದ ಸಮಸ್ಯೆಗಳನ್ನು ಹೇಳಿದಾಗ ಅವರು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದರು. ಅದೊಂದು ಸುವರ್ಣಯುಗ. ಸದ್ಯ ಬರಗಾಲದಲ್ಲಷ್ಟೇ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಿಗುತ್ತಿದೆ. ವಾರಕ್ಕೆ ಹತ್ತತ್ತು ಸಿನಿಮಾ ಬಿಡುಗಡೆ ಮಾಡಿ ನಮ್ಮ ತಲೆ ಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಒಳ್ಳೆಯ ಫಸಲು ಬಂದಾಗ ಪರಭಾಷಾ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಇರುತ್ತವೆ. ಸದ್ಯ ಕಾದಂಬರಿ ಆಧಾರಿತ ಸಿನಿಮಾ ಮಾಡುತ್ತೇನೆ ಎಂದರೆ ಮನೆಗೇ ಸೇರಿಸುವುದಿಲ್ಲ. ಇದು ಸ್ವಂತ ಅನುಭವ. ಮಣ್ಣಿನ ಕಥೆಗಳನ್ನು ಬಿಟ್ಟಿರುವುದರಿಂದ ನಮ್ಮ ಜನ ಸಿನಿಮಾದಿಂದ ದೂರವಾಗುತ್ತಿದ್ದಾರೆ. ನಾನಂತೂ ನೂರನೇ ವಯಸ್ಸಿನಲ್ಲೂ ಕನ್ನಡ ಸಿನಿಮಾ ನಿರ್ದೇಶನ ಮಾಡುತ್ತೇನೆ. ಮೈಸೂರಿನಲ್ಲಿ ಚಿತ್ರನಗರಿ ಶೀಘ್ರದಲ್ಲೇ ಆಗಬೇಕಿದೆ. ಜನತಾ ಟಾಕೀಸ್ ನಿರ್ಮಾಣಕ್ಕೆ ಸಬ್ಸಿಡಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದೂ ಶೀಘ್ರದಲ್ಲೇ ಜಾರಿಯಾಗಬೇಕು’ ಎಂದರು. </p>.<p>‘ರಾಜ್ಕುಮಾರ್ ಅವರ ಜೊತೆ ಸಿನಿಮಾ ಮಾಡುವ ಕನಸಿತ್ತು. ಆದರೆ ಅದು ಈಡೇರಲೇ ಇಲ್ಲ’ ಎಂದು ಮಾತು ಆರಂಭಿಸಿದ ನಿರ್ದೇಶಕ ಗಿರೀಶ ಕಾಸರವಳ್ಳಿ, ‘ನನ್ನ ಎಂಟು ಚಿತ್ರಗಳಿಗೆ ಛಾಯಾಚಿತ್ರಗ್ರಹಣ ಮಾಡಿದವರು ಎಸ್. ರಾಮಚಂದ್ರ ಐತಾಳ್. ಅವರು ಎಂದೂ ತಮ್ಮ ಅಭಿಪ್ರಾಯವನ್ನು ಮುಚ್ಚಿಟ್ಟುಕೊಳ್ಳುತ್ತಿರಲಿಲ್ಲ. ವಿಷಯಗಳನ್ನು ನೇರಾ ನೇರ ಹೇಳುವ ಧೈರ್ಯ ಅವರಿಗಿತ್ತು. ಹೀಗಾಗಿಯೇ ಅವರ ಒಳನೋಟಗಳು ನನ್ನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದವು’ ಎನ್ನುವುದನ್ನು ನೆನಪಿಸಿಕೊಂಡರು. </p>.<p>ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮಾತನಾಡಿ, ‘ನಿರ್ಮಾಪಕರು, ಪ್ರದರ್ಶಕರು, ವಿತರಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಸಬ್ಸಿಡಿಯನ್ನು ತೆಗೆಯಬಾರದು. ಯಶಸ್ವಿನಿ ಕಾರ್ಡ್ ಅನ್ನು ಚಿತ್ರರಂಗಕ್ಕೂ ವಿಸ್ತರಿಸಬೇಕು. ನಿವೇಶನಕ್ಕಾಗಿ 50 ಎಕರೆ ಜಾಗವನ್ನು ಚಿತ್ರರಂಗಕ್ಕೆ ನೀಡಬೇಕು. ಹೊಸ ಬಡವಾಣೆಗಳಲ್ಲಿ ಮಿನಿ ಚಿತ್ರಮಂದಿರ ನಿರ್ಮಾಣ ಹಾಗೂ ಚಿತ್ರರಂಗಕ್ಕೆ ಸಮುದಾಯ ಭವನ ನಿರ್ಮಿಸಿಕೊಡಬೇಕು. ಶೀಘ್ರದಲ್ಲೇ ಚಿತ್ರನಗರಿಯ ಶಂಕುಸ್ಥಾಪನೆ ಮಾಡಿ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು. </p>.<p>ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ನಿರ್ದೇಶಕರಾದ ಗಿರೀಶ ಕಾಸರವಳ್ಳಿ, ರಾಜೇಂದ್ರ ಸಿಂಗ್ ಬಾಬು, ನಟಿ ಜಯಮಾಲಾ, ನಿರ್ಮಾಪಕರಾದ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಛಾಯಾಚಿತ್ರಗ್ರಾಹಕ ಎಸ್.ರಾಮಚಂದ್ರ ಅವರಿಗೆ ಗೌರವಿಸಲಾಯಿತು. ಪಾರ್ವತಮ್ಮ ಅವರ ಪರವಾಗಿ ಮಗಳು ಪೂರ್ಣಿಮಾ ರಾಮ್ಕುಮಾರ್ ಹಾಗೂ ರಾಮಚಂದ್ರ ಅವರ ಪರವಾಗಿ ಅವರ ಸೋದರ ಶಂಕರ್ ಐತಾಳ್ ಸ್ಮರಣಿಕೆ ಸ್ವೀಕರಿಸಿದರು. </p>.<p>ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಇದ್ದರು. </p>.<div><blockquote>ನಮ್ಮ ಇಡೀ ಕುಟುಂಬಕ್ಕೆ ಅಮ್ಮ ಅನ್ನಪೂರ್ಣೇಶ್ವರಿಯಂತೆ ಇದ್ದರು. ಸಿನಿಮಾ ಕುಟುಂಬಕ್ಕೂ ಹಾಗೆಯೇ ಇದ್ದರು. ಹಲವು ಕನ್ನಡದ ಕಲಾವಿದರನ್ನು ಪರಿಚಯಿಸಿದವರು ಅಮ್ಮ. </blockquote><span class="attribution">–ಪೂರ್ಣಿಮಾ ರಾಮ್ಕುಮಾರ್, ನಟಿ</span></div>.<div><blockquote>ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ರಾಜ್ಕುಮಾರ್ ಬೆನ್ನೆಲುಬಾಗಿದ್ದರು. ಯಾವುದೇ ಕಾರಣಕ್ಕೂ ಸಬ್ಸಿಡಿ ನಿಲ್ಲಿಸುವುದಿಲ್ಲ. </blockquote><span class="attribution">–ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಸಿನಿಮಾ ಸಂಸ್ಕೃತಿ, ಅಭಿರುಚಿ ಎಲ್ಲೆಡೆ ಬೆಳೆಯಲು ಚಿತ್ರೋತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಬೇಕು’ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಆಗ್ರಹಿಸಿದರು. </p>.<p>17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಶುಕ್ರವಾರ ನಡೆದ ‘ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಛಾಯಾಚಿತ್ರಗ್ರಾಹಕ ಎಸ್.ರಾಮಚಂದ್ರ ಸಿನಿಪಯಣದ ಸುವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. </p>.<p>‘ಕನ್ನಡ ಚಿತ್ರರಂಗದ ಪ್ರಸ್ತುತ ಸ್ಥಿತಿಗೆ ಪಾರ್ವತಮ್ಮ ರಾಜ್ಕುಮಾರ್ ಅವರಂಥ ನಾಯಕತ್ವದ ಕೊರತೆಯೇ ಕಾರಣ. ಚಿತ್ರರಂಗದ ಸಮಸ್ಯೆಗಳನ್ನು ಹೇಳಿದಾಗ ಅವರು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದರು. ಅದೊಂದು ಸುವರ್ಣಯುಗ. ಸದ್ಯ ಬರಗಾಲದಲ್ಲಷ್ಟೇ ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಿಗುತ್ತಿದೆ. ವಾರಕ್ಕೆ ಹತ್ತತ್ತು ಸಿನಿಮಾ ಬಿಡುಗಡೆ ಮಾಡಿ ನಮ್ಮ ತಲೆ ಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಒಳ್ಳೆಯ ಫಸಲು ಬಂದಾಗ ಪರಭಾಷಾ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಇರುತ್ತವೆ. ಸದ್ಯ ಕಾದಂಬರಿ ಆಧಾರಿತ ಸಿನಿಮಾ ಮಾಡುತ್ತೇನೆ ಎಂದರೆ ಮನೆಗೇ ಸೇರಿಸುವುದಿಲ್ಲ. ಇದು ಸ್ವಂತ ಅನುಭವ. ಮಣ್ಣಿನ ಕಥೆಗಳನ್ನು ಬಿಟ್ಟಿರುವುದರಿಂದ ನಮ್ಮ ಜನ ಸಿನಿಮಾದಿಂದ ದೂರವಾಗುತ್ತಿದ್ದಾರೆ. ನಾನಂತೂ ನೂರನೇ ವಯಸ್ಸಿನಲ್ಲೂ ಕನ್ನಡ ಸಿನಿಮಾ ನಿರ್ದೇಶನ ಮಾಡುತ್ತೇನೆ. ಮೈಸೂರಿನಲ್ಲಿ ಚಿತ್ರನಗರಿ ಶೀಘ್ರದಲ್ಲೇ ಆಗಬೇಕಿದೆ. ಜನತಾ ಟಾಕೀಸ್ ನಿರ್ಮಾಣಕ್ಕೆ ಸಬ್ಸಿಡಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದೂ ಶೀಘ್ರದಲ್ಲೇ ಜಾರಿಯಾಗಬೇಕು’ ಎಂದರು. </p>.<p>‘ರಾಜ್ಕುಮಾರ್ ಅವರ ಜೊತೆ ಸಿನಿಮಾ ಮಾಡುವ ಕನಸಿತ್ತು. ಆದರೆ ಅದು ಈಡೇರಲೇ ಇಲ್ಲ’ ಎಂದು ಮಾತು ಆರಂಭಿಸಿದ ನಿರ್ದೇಶಕ ಗಿರೀಶ ಕಾಸರವಳ್ಳಿ, ‘ನನ್ನ ಎಂಟು ಚಿತ್ರಗಳಿಗೆ ಛಾಯಾಚಿತ್ರಗ್ರಹಣ ಮಾಡಿದವರು ಎಸ್. ರಾಮಚಂದ್ರ ಐತಾಳ್. ಅವರು ಎಂದೂ ತಮ್ಮ ಅಭಿಪ್ರಾಯವನ್ನು ಮುಚ್ಚಿಟ್ಟುಕೊಳ್ಳುತ್ತಿರಲಿಲ್ಲ. ವಿಷಯಗಳನ್ನು ನೇರಾ ನೇರ ಹೇಳುವ ಧೈರ್ಯ ಅವರಿಗಿತ್ತು. ಹೀಗಾಗಿಯೇ ಅವರ ಒಳನೋಟಗಳು ನನ್ನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದವು’ ಎನ್ನುವುದನ್ನು ನೆನಪಿಸಿಕೊಂಡರು. </p>.<p>ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮಾತನಾಡಿ, ‘ನಿರ್ಮಾಪಕರು, ಪ್ರದರ್ಶಕರು, ವಿತರಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಸಬ್ಸಿಡಿಯನ್ನು ತೆಗೆಯಬಾರದು. ಯಶಸ್ವಿನಿ ಕಾರ್ಡ್ ಅನ್ನು ಚಿತ್ರರಂಗಕ್ಕೂ ವಿಸ್ತರಿಸಬೇಕು. ನಿವೇಶನಕ್ಕಾಗಿ 50 ಎಕರೆ ಜಾಗವನ್ನು ಚಿತ್ರರಂಗಕ್ಕೆ ನೀಡಬೇಕು. ಹೊಸ ಬಡವಾಣೆಗಳಲ್ಲಿ ಮಿನಿ ಚಿತ್ರಮಂದಿರ ನಿರ್ಮಾಣ ಹಾಗೂ ಚಿತ್ರರಂಗಕ್ಕೆ ಸಮುದಾಯ ಭವನ ನಿರ್ಮಿಸಿಕೊಡಬೇಕು. ಶೀಘ್ರದಲ್ಲೇ ಚಿತ್ರನಗರಿಯ ಶಂಕುಸ್ಥಾಪನೆ ಮಾಡಿ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು. </p>.<p>ಕನ್ನಡ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ನಿರ್ದೇಶಕರಾದ ಗಿರೀಶ ಕಾಸರವಳ್ಳಿ, ರಾಜೇಂದ್ರ ಸಿಂಗ್ ಬಾಬು, ನಟಿ ಜಯಮಾಲಾ, ನಿರ್ಮಾಪಕರಾದ ಪಾರ್ವತಮ್ಮ ರಾಜ್ಕುಮಾರ್ ಹಾಗೂ ಛಾಯಾಚಿತ್ರಗ್ರಾಹಕ ಎಸ್.ರಾಮಚಂದ್ರ ಅವರಿಗೆ ಗೌರವಿಸಲಾಯಿತು. ಪಾರ್ವತಮ್ಮ ಅವರ ಪರವಾಗಿ ಮಗಳು ಪೂರ್ಣಿಮಾ ರಾಮ್ಕುಮಾರ್ ಹಾಗೂ ರಾಮಚಂದ್ರ ಅವರ ಪರವಾಗಿ ಅವರ ಸೋದರ ಶಂಕರ್ ಐತಾಳ್ ಸ್ಮರಣಿಕೆ ಸ್ವೀಕರಿಸಿದರು. </p>.<p>ಈ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಇದ್ದರು. </p>.<div><blockquote>ನಮ್ಮ ಇಡೀ ಕುಟುಂಬಕ್ಕೆ ಅಮ್ಮ ಅನ್ನಪೂರ್ಣೇಶ್ವರಿಯಂತೆ ಇದ್ದರು. ಸಿನಿಮಾ ಕುಟುಂಬಕ್ಕೂ ಹಾಗೆಯೇ ಇದ್ದರು. ಹಲವು ಕನ್ನಡದ ಕಲಾವಿದರನ್ನು ಪರಿಚಯಿಸಿದವರು ಅಮ್ಮ. </blockquote><span class="attribution">–ಪೂರ್ಣಿಮಾ ರಾಮ್ಕುಮಾರ್, ನಟಿ</span></div>.<div><blockquote>ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ರಾಜ್ಕುಮಾರ್ ಬೆನ್ನೆಲುಬಾಗಿದ್ದರು. ಯಾವುದೇ ಕಾರಣಕ್ಕೂ ಸಬ್ಸಿಡಿ ನಿಲ್ಲಿಸುವುದಿಲ್ಲ. </blockquote><span class="attribution">–ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>