ಚೆನ್ನೈನ ಕೋಡಂಬಾಕಮ್ನಲ್ಲಿ ನಟ ರಜನಿಕಾಂತ್ ಅವರು ‘ಶ್ರೀ ರಾಘವೇಂದ್ರ’ ಹೆಸರಿನ ಕಲ್ಯಾಣ ಮಂಟಪ ಹೊಂದಿದ್ದಾರೆ. ಈ ಮಂಟಪದ ಆಸ್ತಿ ತೆರಿಗೆ ಮತ್ತು ತೆರಿಗೆ ಪಾವತಿಸುವಲ್ಲಿನ ವಿಳಂಬಕ್ಕೆ ‘ಗ್ರೇಟರ್ ಚೆನ್ನೈ ಕಾರ್ಪೊರೇಷನ್’ ದಂಡ ವಿಧಿಸಿತ್ತು. ಇದರ ವಿರುದ್ಧ ರಜನಿಕಾಂತ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ನಲ್ಲಿ ರಜನಿಕಾಂತ್ ಭಾರಿ ಮುಖಭಂಗ ಎದುರಿಸಬೇಕಾಯಿತು. ಈ ಅರ್ಜಿಯು ನ್ಯಾಯಾಲಯದ ಸಮಯ ಹಾಳು ಮಾಡುವಂಥದ್ದು ಎಂದು ಹೈಕೋರ್ಟ್ ಬುಧವಾರ ಹೇಳಿತ್ತು. ಅಲ್ಲದೇ, ಅರ್ಜಿ ಹಿಂಪಡೆಯದಿದ್ದರೆ ದಂಡ ವಿಧಿಸುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು.