<p>ಕ್ರೈಂ ಥ್ರಿಲ್ಲರ್, ರಾಜಕೀಯ ವಿಷಯಗಳ ಬಗ್ಗೆಯೇ ಸಿನಿಮಾ ಮಾಡುವ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರ ಕಣ್ಣು ಈಗ ಫ್ಯಾಮಿಲಿ ಕಡೆ ತಿರುಗಿದೆ.</p>.<p>'ಕಮ್ಮ ರಾಜ್ಯಂಕಡಪ ರೆಡ್ಡಿಲು' ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಭಾರಿ ವಿವಾದ ಸೃಷ್ಟಿಸಿದೆ. ಈ ನಡುವೆಯೇ ಆರ್ಜಿವಿ ಹೊಸ ಸಿನಿಮಾ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.</p>.<p>‘ಮೆಗಾ ಫ್ಯಾಮಿಲಿ‘ಯು 39 ಮಕ್ಕಳನ್ನು ಹೊಂದಿರುವ ವ್ಯಕ್ತಿಯ ಕಥೆ. ಆದರೆ, ಇಲ್ಲಿ ಸಾಕಷ್ಟು ಮಕ್ಕಳಿದ್ದಾರೆ ಮತ್ತು ಮಕ್ಕಳ ಸಿನಿಮಾ ಮಾಡುವುದರಲ್ಲಿ ನಾನು ಅಷ್ಟು ನಿಪುಣನಲ್ಲ. ಹಾಗಾಗಿ ನಾನು ಮಕ್ಕಳ ಸಿನಿಮಾ ಮಾಡುವುದಿಲ್ಲ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.</p>.<p>ಅವರ ಟ್ವೀಟ್ ನೋಡಿದ ಅನೇಕರು ನಿಜಕ್ಕೂ ಆರ್ಜಿವಿ ಈ ಸಿನಿಮಾ ಮಾಡುತ್ತಾರೆಯೇ ಎನ್ನುವ ಗೊಂದಲಕ್ಕೆ ಬಿದ್ದಿದ್ದಾರೆ. ವರ್ಮಾ ತಮ್ಮ ಈ ಹಿಂದಿನ ಸಿನಿಮಾಗಳನ್ನು ಪ್ರಕಟಿಸಿದ ರೀತಿ ಹಾಗೂ ಈ ಸಿನಮಾದ ಹೇಳಿದ ರೀತಿ ನೋಡಿ ಟ್ವೀಟಿಗರಲ್ಲಿ ಈ ಗೊಂದಲ ಮೂಡಿದ್ದು, ಇದರ ಹಿಂದಿನ ಮರ್ಮವನ್ನು ವರ್ಮಾ ಅವರೇ ಹೇಳಬೇಕಿದೆ.</p>.<p>ರಾಮ್ ಗೋಪಾಲ್ ವರ್ಮಾ ಅವರ ಈ ಟ್ವೀಟ್ಗೆ ಪವನ್ ಕಲ್ಯಾಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳುವ್ಯಂಗ್ಯ ಮಾಡಿದ್ದು, ಸಾಕಷ್ಟು ಟ್ರೋಲ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕ್ರೈಂ ಥ್ರಿಲ್ಲರ್, ರಾಜಕೀಯ ವಿಷಯಗಳ ಬಗ್ಗೆಯೇ ಸಿನಿಮಾ ಮಾಡುವ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರ ಕಣ್ಣು ಈಗ ಫ್ಯಾಮಿಲಿ ಕಡೆ ತಿರುಗಿದೆ.</p>.<p>'ಕಮ್ಮ ರಾಜ್ಯಂಕಡಪ ರೆಡ್ಡಿಲು' ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಭಾರಿ ವಿವಾದ ಸೃಷ್ಟಿಸಿದೆ. ಈ ನಡುವೆಯೇ ಆರ್ಜಿವಿ ಹೊಸ ಸಿನಿಮಾ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.</p>.<p>‘ಮೆಗಾ ಫ್ಯಾಮಿಲಿ‘ಯು 39 ಮಕ್ಕಳನ್ನು ಹೊಂದಿರುವ ವ್ಯಕ್ತಿಯ ಕಥೆ. ಆದರೆ, ಇಲ್ಲಿ ಸಾಕಷ್ಟು ಮಕ್ಕಳಿದ್ದಾರೆ ಮತ್ತು ಮಕ್ಕಳ ಸಿನಿಮಾ ಮಾಡುವುದರಲ್ಲಿ ನಾನು ಅಷ್ಟು ನಿಪುಣನಲ್ಲ. ಹಾಗಾಗಿ ನಾನು ಮಕ್ಕಳ ಸಿನಿಮಾ ಮಾಡುವುದಿಲ್ಲ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.</p>.<p>ಅವರ ಟ್ವೀಟ್ ನೋಡಿದ ಅನೇಕರು ನಿಜಕ್ಕೂ ಆರ್ಜಿವಿ ಈ ಸಿನಿಮಾ ಮಾಡುತ್ತಾರೆಯೇ ಎನ್ನುವ ಗೊಂದಲಕ್ಕೆ ಬಿದ್ದಿದ್ದಾರೆ. ವರ್ಮಾ ತಮ್ಮ ಈ ಹಿಂದಿನ ಸಿನಿಮಾಗಳನ್ನು ಪ್ರಕಟಿಸಿದ ರೀತಿ ಹಾಗೂ ಈ ಸಿನಮಾದ ಹೇಳಿದ ರೀತಿ ನೋಡಿ ಟ್ವೀಟಿಗರಲ್ಲಿ ಈ ಗೊಂದಲ ಮೂಡಿದ್ದು, ಇದರ ಹಿಂದಿನ ಮರ್ಮವನ್ನು ವರ್ಮಾ ಅವರೇ ಹೇಳಬೇಕಿದೆ.</p>.<p>ರಾಮ್ ಗೋಪಾಲ್ ವರ್ಮಾ ಅವರ ಈ ಟ್ವೀಟ್ಗೆ ಪವನ್ ಕಲ್ಯಾಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳುವ್ಯಂಗ್ಯ ಮಾಡಿದ್ದು, ಸಾಕಷ್ಟು ಟ್ರೋಲ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>