<p><strong>ಹೈದರಾಬಾದ್: </strong>ನಟಿ ರಶ್ಮಿಕಾ ಮಂದಣ್ಣ ತೆಲುಗಿನ ‘ಸರಿಲೇರು ನೀಕೆವ್ವರು’ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದರಲ್ಲಿ ಮಹೇಶ್ಬಾಬು ಮತ್ತು ಆಕೆಯ ಕೆಮಿಸ್ಟ್ರಿ ಯಶಸ್ವಿಯಾಗಿದೆ.</p>.<p>ವಿಜಯ ದೇವರಕೊಂಡ ಜೊತೆಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್’ ಚಿತ್ರದ ಸೋಲಿನಿಂದ ದಿಕ್ಕೆಟ್ಟಿದ್ದ ಆಕೆಗೆ ಈ ಸಿನಿಮಾದ ಯಶಸ್ಸು ಹೊಸ ಹುರುಪು ತುಂಬಿದೆ. ಮತ್ತೊಂದೆಡೆ ಈ ಗೆಲುವೇ ಆಕೆಗೆ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳಿಗೆ ರತ್ನಗಂಬಳಿಯನ್ನೂ ಹಾಸಿದೆ.</p>.<p>ಪ್ರಸ್ತುತ ರಶ್ಮಿಕಾ ಅವರು ಅಲ್ಲು ಅರ್ಜುನ್ ಜೊತೆಗೆ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ನಿರ್ದೇಶಿಸುತ್ತಿರುವುದು ಸುಕುಮಾರ್. ಈ ನಡುವೆಯೇ ನಟ ಅಕ್ಕಿನೇನಿ ನಾಗಚೈತನ್ಯ ನಟನೆಯ ಹೊಸ ಚಿತ್ರ ‘ನಾಗೇಶ್ವರರಾವ್’ದಲ್ಲಿ ನಟಿಸುವಂತೆ ಆಕೆಗೆ ಆಫರ್ ಬಂದಿದೆಯಂತೆ. </p>.<p>ತೆಲುಗಿನಲ್ಲಿ ಆಕೆಗೆ ಭದ್ರನೆಲೆ ಒದಗಿಸಿದ ಚಿತ್ರ ‘ಗೀತ ಗೋವಿಂದಂ’. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪರಶುರಾಮ್ ಅವರೇ ‘ನಾಗೇಶ್ವರರಾವ್’ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಅವರೇ ಈ ಚಿತ್ರದಲ್ಲಿ ನಟಿಸುವಂತೆ ರಶ್ಮಿಕಾಗೆ ಕೋರಿದ್ದಾರಂತೆ. ಶೀಘ್ರವೇ, ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಆದರೆ, ಇದರಲ್ಲಿ ನಟಿಸುವ ಬಗ್ಗೆ ಇನ್ನೂ ಆಕೆ ಯಾವುದೇ ಒಪ್ಪಿಗೆ ನೀಡಿಲ್ಲವಂತೆ. ಟಾಲಿವುಡ್ನಲ್ಲಿ ರಶ್ಮಿಕಾಗೆ ಗಟ್ಟಿನೆಲೆ ಕಲ್ಪಿಸಿದ್ದು, ಪರಶುರಾಮ್. ಹಾಗಾಗಿಯೇ, ರಶ್ಮಿಕಾ ಸಮ್ಮತಿಸುವ ನಿರೀಕ್ಷೆಯಿದೆ ಎನ್ನುವುದು ಆಕೆಯ ಅಭಿಮಾನಿಗಳ ಲೆಕ್ಕಾಚಾರ.</p>.<p>ತಮಿಳಿನ ‘ಸುಲ್ತಾನ್’ ಚಿತ್ರದಲ್ಲಿ ನಟಿಸಲು ರಶ್ಮಿಕಾ ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಬಕ್ಕಿಯರಾಜ್ ಕಣ್ಣನ್. ಕನ್ನಡದಲ್ಲಿಯೂ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾಕ್ಕೂ ಆಕೆಯೇ ನಾಯಕಿ. ಇದರಲ್ಲಿ ಆಕೆಯದು ಶಿಕ್ಷಕಿಯ ಪಾತ್ರ. ಮಾರ್ಚ್ ಅಂತ್ಯಕ್ಕೆ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ ನಿತಿನ್ ನಾಯಕರಾಗಿರುವ ತೆಲುಗಿನ ‘ಭೀಷ್ಮ’ ಚಿತ್ರಕ್ಕೂ ಅವರೇ ಹೀರೊಯಿನ್. ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದು. ಫೆ. 21ರಂದು ಥಿಯೇಟರ್ಗೆ ಲಗ್ಗೆ ಇಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ನಟಿ ರಶ್ಮಿಕಾ ಮಂದಣ್ಣ ತೆಲುಗಿನ ‘ಸರಿಲೇರು ನೀಕೆವ್ವರು’ ಸಿನಿಮಾದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದರಲ್ಲಿ ಮಹೇಶ್ಬಾಬು ಮತ್ತು ಆಕೆಯ ಕೆಮಿಸ್ಟ್ರಿ ಯಶಸ್ವಿಯಾಗಿದೆ.</p>.<p>ವಿಜಯ ದೇವರಕೊಂಡ ಜೊತೆಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್’ ಚಿತ್ರದ ಸೋಲಿನಿಂದ ದಿಕ್ಕೆಟ್ಟಿದ್ದ ಆಕೆಗೆ ಈ ಸಿನಿಮಾದ ಯಶಸ್ಸು ಹೊಸ ಹುರುಪು ತುಂಬಿದೆ. ಮತ್ತೊಂದೆಡೆ ಈ ಗೆಲುವೇ ಆಕೆಗೆ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳಿಗೆ ರತ್ನಗಂಬಳಿಯನ್ನೂ ಹಾಸಿದೆ.</p>.<p>ಪ್ರಸ್ತುತ ರಶ್ಮಿಕಾ ಅವರು ಅಲ್ಲು ಅರ್ಜುನ್ ಜೊತೆಗೆ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಚಿತ್ರ ನಿರ್ದೇಶಿಸುತ್ತಿರುವುದು ಸುಕುಮಾರ್. ಈ ನಡುವೆಯೇ ನಟ ಅಕ್ಕಿನೇನಿ ನಾಗಚೈತನ್ಯ ನಟನೆಯ ಹೊಸ ಚಿತ್ರ ‘ನಾಗೇಶ್ವರರಾವ್’ದಲ್ಲಿ ನಟಿಸುವಂತೆ ಆಕೆಗೆ ಆಫರ್ ಬಂದಿದೆಯಂತೆ. </p>.<p>ತೆಲುಗಿನಲ್ಲಿ ಆಕೆಗೆ ಭದ್ರನೆಲೆ ಒದಗಿಸಿದ ಚಿತ್ರ ‘ಗೀತ ಗೋವಿಂದಂ’. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಪರಶುರಾಮ್ ಅವರೇ ‘ನಾಗೇಶ್ವರರಾವ್’ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಅವರೇ ಈ ಚಿತ್ರದಲ್ಲಿ ನಟಿಸುವಂತೆ ರಶ್ಮಿಕಾಗೆ ಕೋರಿದ್ದಾರಂತೆ. ಶೀಘ್ರವೇ, ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಆದರೆ, ಇದರಲ್ಲಿ ನಟಿಸುವ ಬಗ್ಗೆ ಇನ್ನೂ ಆಕೆ ಯಾವುದೇ ಒಪ್ಪಿಗೆ ನೀಡಿಲ್ಲವಂತೆ. ಟಾಲಿವುಡ್ನಲ್ಲಿ ರಶ್ಮಿಕಾಗೆ ಗಟ್ಟಿನೆಲೆ ಕಲ್ಪಿಸಿದ್ದು, ಪರಶುರಾಮ್. ಹಾಗಾಗಿಯೇ, ರಶ್ಮಿಕಾ ಸಮ್ಮತಿಸುವ ನಿರೀಕ್ಷೆಯಿದೆ ಎನ್ನುವುದು ಆಕೆಯ ಅಭಿಮಾನಿಗಳ ಲೆಕ್ಕಾಚಾರ.</p>.<p>ತಮಿಳಿನ ‘ಸುಲ್ತಾನ್’ ಚಿತ್ರದಲ್ಲಿ ನಟಿಸಲು ರಶ್ಮಿಕಾ ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಬಕ್ಕಿಯರಾಜ್ ಕಣ್ಣನ್. ಕನ್ನಡದಲ್ಲಿಯೂ ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾಕ್ಕೂ ಆಕೆಯೇ ನಾಯಕಿ. ಇದರಲ್ಲಿ ಆಕೆಯದು ಶಿಕ್ಷಕಿಯ ಪಾತ್ರ. ಮಾರ್ಚ್ ಅಂತ್ಯಕ್ಕೆ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ ನಿತಿನ್ ನಾಯಕರಾಗಿರುವ ತೆಲುಗಿನ ‘ಭೀಷ್ಮ’ ಚಿತ್ರಕ್ಕೂ ಅವರೇ ಹೀರೊಯಿನ್. ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದು. ಫೆ. 21ರಂದು ಥಿಯೇಟರ್ಗೆ ಲಗ್ಗೆ ಇಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>