ಈ ಚಿತ್ರವನ್ನು ತ್ರಿನಾದ ರಾವ್ ನಕ್ಕಿನ ಅವರು ನಿರ್ದೇಶಿಸುತ್ತಿದ್ದಾರೆ. ತ್ರಿನಾದ ಅವರು ‘ನೇನು ಲೋಕಲ್ʼ ಹೆಸರಿನ ಹಾಸ್ಯ, ಥ್ರಿಲ್ಲರ್ ಪ್ರಧಾನ ಚಿತ್ರ ನಿರ್ಮಿಸಿದವರು. ಹೊಸ ಚಿತ್ರದಲ್ಲಿ ರವಿತೇಜ ಅವರದ್ದು ಪತ್ತೆದಾರನ ಪಾತ್ರ. ಈ ಚಿತ್ರಕ್ಕೆ ಹಾಲು ಬಿಳುಪಿನ ಚೆಲುವೆ ತಮನ್ನಾ ಭಾಟಿಯಾ ಅವರನ್ನು ನಾಯಕಿಯಾಗಿ ಕರೆತರಲು ಚಿಂತನೆ ನಡೆದಿದೆ ಎಂದು ತಂಡದ ಮೂಲಗಳು ಹೇಳಿವೆ. ನಾಯಕ- ನಿರ್ದೇಶಕರ ಸಂಯೋಜನೆ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳದ್ದು. ಚಿತ್ರವನ್ನು ಕೊನೆರು ಸತ್ಯನಾರಾಯಣ ನಿರ್ಮಿಸುತ್ತಿದ್ದಾರೆ.