<p>ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅಪ್ಪಂದಿರ ದಿನದಂದು ತಮ್ಮ ಮುಂದಿನ ಚಿತ್ರ ‘ಮರ್ಡರ್’ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ತೆಲಂಗಾಣದಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯಸತ್ಯ ಕತೆಯನ್ನು ಆಧರಿಸಿ ಈ ಚಿತ್ರಕತೆ ಹೆಣೆಯಲಾಗಿದೆ.</p>.<p>2018ರ ಸೆಪ್ಟೆಂಬರ್ನಲ್ಲಿ 24 ವರ್ಷದ ಪ್ರಣಯ್ ತನ್ನ ಐದು ತಿಂಗಳ ಗರ್ಭಿಣಿ ಪತ್ನಿ ಅಮೃತಾಳೊಂದಿಗೆ ಆಸ್ಪತ್ರೆಯಿಂದ ಮರಳುವಾಗ ಆತನನ್ನು ಹತ್ಯೆ ಮಾಡಲಾಗಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಪ್ರಣಯ್ನನ್ನು ಸ್ವತಃ ಅಮೃತಾಳ ಅಪ್ಪ ಮಾರುತಿ ರಾವ್ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದ.</p>.<p>ಈ ಘಟನೆ ನಡೆದ ಸಂದರ್ಭದಲ್ಲಿಯೇ ಈ ಟ್ರಾಜಿಕ್ ಲವ್ಸ್ಟೋರಿ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದಾಗಿ ವರ್ಮಾ ಘೋಷಿಸಿದ್ದರು. ಈಗ ಸದ್ದಿಲ್ಲದೇಚಿತ್ರಕತೆ ಮುಗಿಸಿದ್ದು, ಸಿನಿಮಾಕ್ಕೆ ‘ಮರ್ಡರ್’ ಎಂದು ಹೆಸರಿಡಲಾಗಿದೆ. ಚಿತ್ರೀಕರಣಕ್ಕೆ ಪೂರ್ವಸಿದ್ಧತೆ ನಡೆಯುತ್ತಿದ್ದು ಶೀಘ್ರದಲ್ಲಿಯೇ ಚಿತ್ರ ಸೆಟ್ಟೇರಲಿದೆ.</p>.<p>ಜೂನ್ 21 ರಂದು ಅಪ್ಪಂದಿರ ದಿನವೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿರುವ ವರ್ಮಾ, ‘ಮಗಳ ಮೇಲಿನ ಅಪ್ಪನ ಅತಿಯಾದ ಪ್ರೀತಿಯೇ ದುರಂತ ಅಂತ್ಯಕ್ಕೆ ಕಾರಣ. ಇಂಥ ಅಪ್ಪ ಯಾರಿಗೂ ಸಿಗದಿರಲಿ’ ಎಂದು ಟ್ವೀಟ್ ಮಾಡಿದ್ದಾರೆ.</p>.<p>ಮಗಳನ್ನು ಅತಿಯಾಗಿ ಪ್ರೀತಿಸುವ ಅಪ್ಪನ ಅತಿಯಾದ ‘ಪೊಸೆಸಿವ್ನೆಸ್’ ಮತ್ತು ‘ದುಡುಕು ನಿರ್ಧಾರ’ದ ಸುತ್ತ ಸಿನಿಮಾ ಕತೆ ಗಿರಕಿ ಹೊಡೆಯಲಿದೆ ಎಂಬ ಸುಳಿವನ್ನು ಆರ್ಜಿವಿ ನೀಡಿದ್ದಾರೆ. ಪೋಸ್ಟರ್ನಲ್ಲೂ ಅಪ್ಪ– ಮಗಳ ಫೋಟೊ ಕೂಡ ಇದನ್ನೇ ಹೇಳುತ್ತದೆ.</p>.<p>ಅಮೃತಾಳ ಪಾತ್ರವನ್ನುಅವಂಚ ಸಾಹಿತಿ ನಿರ್ವಹಿಸಲಿದ್ದಾರೆ.‘ಕೊರೊನಾ ವೈರಸ್’ ಸಿನಿಮಾದ ಮುಖ್ಯ ಪಾತ್ರಧಾರಿ, ನಟ ಶ್ರೀಕಾಂತ್ ಅಯ್ಯಂಗಾರ್ ಅಪ್ಪ ಮಾರುತಿ ರಾವ್ ಪಾತ್ರದಲ್ಲಿ ನಟಿಸಲಿದ್ದಾರೆ.</p>.<p>ಈ ಸಿನಿಮಾವು ಮಕ್ಕಳ ಮೇಲೆ ತಂದೆಯ ನಿಯಂತ್ರಣದ ಮಿತಿ, ಮಗಳಿಗೆ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ಅದರ ನಿರ್ಲಕ್ಷ್ಯದಿಂದ ಆದ ಪರಿಣಾಮ ಹಾಗೂ ಒಬ್ಬರ ಜೀವನವನ್ನು ಉತ್ತಮಗೊಳಿಸಲು ಬೇರೊಬ್ಬರ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಸಮರ್ಥಿಸಿಕೊಳ್ಳಬಹುದೇ? ಎಂಬ ನೈತಿಕ ಪ್ರಶ್ನೆಗಳೊಂದಿಗೆ ಈ ಸಿನಿಮಾ ನಿಮ್ಮ ಮುಂದೆ ಬರಲಿದೆ ಎಂದು ಆರ್ಜಿವಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅಪ್ಪಂದಿರ ದಿನದಂದು ತಮ್ಮ ಮುಂದಿನ ಚಿತ್ರ ‘ಮರ್ಡರ್’ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ತೆಲಂಗಾಣದಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯಸತ್ಯ ಕತೆಯನ್ನು ಆಧರಿಸಿ ಈ ಚಿತ್ರಕತೆ ಹೆಣೆಯಲಾಗಿದೆ.</p>.<p>2018ರ ಸೆಪ್ಟೆಂಬರ್ನಲ್ಲಿ 24 ವರ್ಷದ ಪ್ರಣಯ್ ತನ್ನ ಐದು ತಿಂಗಳ ಗರ್ಭಿಣಿ ಪತ್ನಿ ಅಮೃತಾಳೊಂದಿಗೆ ಆಸ್ಪತ್ರೆಯಿಂದ ಮರಳುವಾಗ ಆತನನ್ನು ಹತ್ಯೆ ಮಾಡಲಾಗಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಪ್ರಣಯ್ನನ್ನು ಸ್ವತಃ ಅಮೃತಾಳ ಅಪ್ಪ ಮಾರುತಿ ರಾವ್ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದ.</p>.<p>ಈ ಘಟನೆ ನಡೆದ ಸಂದರ್ಭದಲ್ಲಿಯೇ ಈ ಟ್ರಾಜಿಕ್ ಲವ್ಸ್ಟೋರಿ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದಾಗಿ ವರ್ಮಾ ಘೋಷಿಸಿದ್ದರು. ಈಗ ಸದ್ದಿಲ್ಲದೇಚಿತ್ರಕತೆ ಮುಗಿಸಿದ್ದು, ಸಿನಿಮಾಕ್ಕೆ ‘ಮರ್ಡರ್’ ಎಂದು ಹೆಸರಿಡಲಾಗಿದೆ. ಚಿತ್ರೀಕರಣಕ್ಕೆ ಪೂರ್ವಸಿದ್ಧತೆ ನಡೆಯುತ್ತಿದ್ದು ಶೀಘ್ರದಲ್ಲಿಯೇ ಚಿತ್ರ ಸೆಟ್ಟೇರಲಿದೆ.</p>.<p>ಜೂನ್ 21 ರಂದು ಅಪ್ಪಂದಿರ ದಿನವೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿರುವ ವರ್ಮಾ, ‘ಮಗಳ ಮೇಲಿನ ಅಪ್ಪನ ಅತಿಯಾದ ಪ್ರೀತಿಯೇ ದುರಂತ ಅಂತ್ಯಕ್ಕೆ ಕಾರಣ. ಇಂಥ ಅಪ್ಪ ಯಾರಿಗೂ ಸಿಗದಿರಲಿ’ ಎಂದು ಟ್ವೀಟ್ ಮಾಡಿದ್ದಾರೆ.</p>.<p>ಮಗಳನ್ನು ಅತಿಯಾಗಿ ಪ್ರೀತಿಸುವ ಅಪ್ಪನ ಅತಿಯಾದ ‘ಪೊಸೆಸಿವ್ನೆಸ್’ ಮತ್ತು ‘ದುಡುಕು ನಿರ್ಧಾರ’ದ ಸುತ್ತ ಸಿನಿಮಾ ಕತೆ ಗಿರಕಿ ಹೊಡೆಯಲಿದೆ ಎಂಬ ಸುಳಿವನ್ನು ಆರ್ಜಿವಿ ನೀಡಿದ್ದಾರೆ. ಪೋಸ್ಟರ್ನಲ್ಲೂ ಅಪ್ಪ– ಮಗಳ ಫೋಟೊ ಕೂಡ ಇದನ್ನೇ ಹೇಳುತ್ತದೆ.</p>.<p>ಅಮೃತಾಳ ಪಾತ್ರವನ್ನುಅವಂಚ ಸಾಹಿತಿ ನಿರ್ವಹಿಸಲಿದ್ದಾರೆ.‘ಕೊರೊನಾ ವೈರಸ್’ ಸಿನಿಮಾದ ಮುಖ್ಯ ಪಾತ್ರಧಾರಿ, ನಟ ಶ್ರೀಕಾಂತ್ ಅಯ್ಯಂಗಾರ್ ಅಪ್ಪ ಮಾರುತಿ ರಾವ್ ಪಾತ್ರದಲ್ಲಿ ನಟಿಸಲಿದ್ದಾರೆ.</p>.<p>ಈ ಸಿನಿಮಾವು ಮಕ್ಕಳ ಮೇಲೆ ತಂದೆಯ ನಿಯಂತ್ರಣದ ಮಿತಿ, ಮಗಳಿಗೆ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ಅದರ ನಿರ್ಲಕ್ಷ್ಯದಿಂದ ಆದ ಪರಿಣಾಮ ಹಾಗೂ ಒಬ್ಬರ ಜೀವನವನ್ನು ಉತ್ತಮಗೊಳಿಸಲು ಬೇರೊಬ್ಬರ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಸಮರ್ಥಿಸಿಕೊಳ್ಳಬಹುದೇ? ಎಂಬ ನೈತಿಕ ಪ್ರಶ್ನೆಗಳೊಂದಿಗೆ ಈ ಸಿನಿಮಾ ನಿಮ್ಮ ಮುಂದೆ ಬರಲಿದೆ ಎಂದು ಆರ್ಜಿವಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>