ಬೆಂಗಳೂರು:‘ಅವಕಾಶಕ್ಕಾಗಿ ಮದುವೆಯ ವಿಷಯವನ್ನು ಮುಚ್ಚಿಟ್ಟು, ಈಗ ಹೊರಗೆ ಹಾಕುತ್ತಿರುವುದರ ಉದ್ದೇಶ ಏನು? ಇವರು ತಮ್ಮ ಪತಿ, ಅತ್ತೆ, ಮಾವ ಅವರ ಎದುರಿಗೆ ತಮ್ಮ ಪಾತಿವ್ರತ್ಯ ಸಾಬೀತುಮಾಡಲು ಹೊರಟಿದ್ದಾರೆಯೇ?’ಎಂದು ಪರೋಕ್ಷವಾಗಿ ಸಂಗೀತಾ ಭಟ್ ಮತ್ತು ಶ್ರುತಿ ಹರಿಹರನ್ ವಿರುದ್ಧ ನಿರ್ದೇಶಕ ಗುರುಪ್ರಸಾದ್ಹರಿಹಾಯ್ದರು. ಜತೆಗೆ, ನಟಿಯರನ್ನು ವಿಷಕನ್ಯೆಯರುಎಂದು ಜರಿದರು.
ಇಂದು ಬೆಂಗಳೂರಿನಲ್ಲಿ ಕುಷ್ಕ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಬಂದಿರುವ ಆರೋಪಗಳು ಗೊತ್ತು. ಆದರೂ ಮೌನವಹಿಸಿದ್ದೇನೆ. ಅದರ ಅರ್ಥ ನನಗೆ ಉತ್ತರ ಕೊಡಲು ಬರುವುದಿಲ್ಲ ಎಂದಲ್ಲ. ನಾವು ಗಂಡಸರು ಮಾತನಾಡಲು ಶುರುಮಾಡಿದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಆತಂಕದಿಂದ ಸುಮ್ಮನಿರುತ್ತೇವೆ’ಎಂದು ಕಿಡಿಕಾರಿದರು.
‘ಎರಡನೇ ಸಲ ಸಿನಿಮಾ ಬೆತ್ತಲೆ ಬೆನ್ನಿನ ದೃಶ್ಯ ಚಿತ್ರೀಕರಿಸುವಾಗ ನನ್ನ ಹೆಂಡತಿ ಮತ್ತು ಮಗಳು ಪಕ್ಕದಲ್ಲೇ ಇದ್ದರು. ನಾನು ಫೋಟೊ ಕಳಿಸಿ ಎಂದಾಗ ಅವರು ಎಂಥ ಫೋಟೊ ಕಳಿಸಿದ್ದರು ಎಂಬುದು ಇನ್ನೂ ನನ್ನ ಬಳಿ ಇದೆ. ಕೆಲವರು ಹೊರಗೆ ಹೋದರೆ ಚಿತ್ರರಂಗದ ಆರೋಗ್ಯ ಸುಧಾರಿಸುತ್ತದೆ. ಅವರು ಈಗ ಚಿತ್ರರಂಗದಿಂದ ದೂರ ಇದ್ದೇನೆ ಎಂದು ಹೇಳಿದ್ದಾರೆ. ಚೆನ್ನಾಗಿರಲಿ' ಎಂದು ಹೆಸರು ಹೇಳದೇ ಸಂಗೀತಾ ಭಟ್ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.