<p><strong>ಬೆಂಗಳೂರು:</strong> ಡ್ರಗ್ಸ್ ಜಾಲ ಪ್ರಕರಣದ ವಿಚಾರಣೆಗಾಗಿ ರಿಯಾಲಿಟಿ ಶೋ ನಿರೂಪಕ ಅಕುಲ್ ಬಾಲಾಜಿ, ಕಾಂಗ್ರೆಸ್ ಮುಖಂಡರೊಬ್ಬರ ಮಗ ಆರ್.ವಿ. ಯುವರಾಜ್ ಹಾಗೂ 'ನೂರು ಜನ್ಮಕು' ಸಿನಿಮಾ ನಟ ಸಂತೋಷ್ ಕುಮಾರ್ ಸಿಸಿಬಿ ಕಚೇರಿಗೆ ಶನಿವಾರ ಬೆಳಿಗ್ಗೆಯೇ ಹಾಜರಾಗಿದ್ದಾರೆ.</p>.<p>ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ಕೆಲ ಮಾಹಿತಿಗಳು ಸಿಕ್ಕಿವೆ. ಅದನ್ನು ಆಧರಿಸಿ ಮೂವರಿಗೂ ನೋಟಿಸ್ ನೀಡಲಾಗಿತ್ತು. ಶನಿವಾರ ಬೆಳಿಗ್ಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು.</p>.<p>ಅದರಂತೆ ಮೂವರು ಕಚೇರಿಗೆ ಬಂದಿದ್ದಾರೆ. ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.<br />ವಿಚಾರಣೆಗೆ ಹೋಗುವ ಮುನ್ನ ಮಾತನಾಡಿದ ಅಕುಲ್ ಬಾಲಾಜಿ, 'ಸಿಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಅವರ ಎಲ್ಲ ಪ್ರಶ್ನೆಗೂ ನಾನು ಉತ್ತರಿಸುತ್ತೇನೆ. ಬಂಧಿತ ಆರೋಪಿ ವೈಭವ್ ಜೈನ್ ಜೊತೆ ಹಾಯ್ ಬಾಯ್ ಸ್ನೇಹ ಅಷ್ಟೇ. ಬೇರೆ ಏನು ಇಲ್ಲ' ಎಂದರು.</p>.<p>'ತಪ್ಪು ಮಾಡಿರದಿದ್ದರೆ ಹೆದರಬೇಡ ಎಂದು ತಾಯಿ ಹೇಳಿದ್ದಾರೆ. ನಾನು ಯಾವ ತಪ್ಪು ಮಾಡಿಲ್ಲ. ಸಿಸಿಬಿ ನನ್ನನ್ನು ಏಕೆ ಕರೆಸಿದೆ ಎಂದು ಗೊತ್ತಿಲ್ಲ. ವಿಚಾರಣೆ ಎದುರಿಸಿದ ಮೇಲೆಯೇ ತಿಳಿಯಲಿದೆ' ಎಂದೂ ಹೇಳಿದರು.</p>.<p>ನಟ ಸಂತೋಷ್ ಕುಮಾರ್, 'ಮೊದಲು ವಿಚಾರಣೆ ಎದುರಿಸುವೆ. ಆ ಮೇಲೆ ಮಾಧ್ಯಮದ ಮುಂದೆ ಮಾತನಾಡುವೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಡ್ರಗ್ಸ್ ಜಾಲ ಪ್ರಕರಣದ ವಿಚಾರಣೆಗಾಗಿ ರಿಯಾಲಿಟಿ ಶೋ ನಿರೂಪಕ ಅಕುಲ್ ಬಾಲಾಜಿ, ಕಾಂಗ್ರೆಸ್ ಮುಖಂಡರೊಬ್ಬರ ಮಗ ಆರ್.ವಿ. ಯುವರಾಜ್ ಹಾಗೂ 'ನೂರು ಜನ್ಮಕು' ಸಿನಿಮಾ ನಟ ಸಂತೋಷ್ ಕುಮಾರ್ ಸಿಸಿಬಿ ಕಚೇರಿಗೆ ಶನಿವಾರ ಬೆಳಿಗ್ಗೆಯೇ ಹಾಜರಾಗಿದ್ದಾರೆ.</p>.<p>ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ಕೆಲ ಮಾಹಿತಿಗಳು ಸಿಕ್ಕಿವೆ. ಅದನ್ನು ಆಧರಿಸಿ ಮೂವರಿಗೂ ನೋಟಿಸ್ ನೀಡಲಾಗಿತ್ತು. ಶನಿವಾರ ಬೆಳಿಗ್ಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು.</p>.<p>ಅದರಂತೆ ಮೂವರು ಕಚೇರಿಗೆ ಬಂದಿದ್ದಾರೆ. ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.<br />ವಿಚಾರಣೆಗೆ ಹೋಗುವ ಮುನ್ನ ಮಾತನಾಡಿದ ಅಕುಲ್ ಬಾಲಾಜಿ, 'ಸಿಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಅವರ ಎಲ್ಲ ಪ್ರಶ್ನೆಗೂ ನಾನು ಉತ್ತರಿಸುತ್ತೇನೆ. ಬಂಧಿತ ಆರೋಪಿ ವೈಭವ್ ಜೈನ್ ಜೊತೆ ಹಾಯ್ ಬಾಯ್ ಸ್ನೇಹ ಅಷ್ಟೇ. ಬೇರೆ ಏನು ಇಲ್ಲ' ಎಂದರು.</p>.<p>'ತಪ್ಪು ಮಾಡಿರದಿದ್ದರೆ ಹೆದರಬೇಡ ಎಂದು ತಾಯಿ ಹೇಳಿದ್ದಾರೆ. ನಾನು ಯಾವ ತಪ್ಪು ಮಾಡಿಲ್ಲ. ಸಿಸಿಬಿ ನನ್ನನ್ನು ಏಕೆ ಕರೆಸಿದೆ ಎಂದು ಗೊತ್ತಿಲ್ಲ. ವಿಚಾರಣೆ ಎದುರಿಸಿದ ಮೇಲೆಯೇ ತಿಳಿಯಲಿದೆ' ಎಂದೂ ಹೇಳಿದರು.</p>.<p>ನಟ ಸಂತೋಷ್ ಕುಮಾರ್, 'ಮೊದಲು ವಿಚಾರಣೆ ಎದುರಿಸುವೆ. ಆ ಮೇಲೆ ಮಾಧ್ಯಮದ ಮುಂದೆ ಮಾತನಾಡುವೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>