ದಕ್ಷಿಣ ಭಾರತದ ಖ್ಯಾತ ಕಲಾವಿದರೊಬ್ಬರು ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದಷ್ಟೇ ಚಿತ್ರತಂಡವು ಮಾಹಿತಿ ನೀಡಿದೆ. ಎರಡು ಭಾಗಗಳಲ್ಲಿ ಚಿತ್ರವು ತೆರೆಕಾಣಲಿದ್ದು, ಬಹುಭಾಷಾ ನಟರು ತಾರಾಬಳಗದಲ್ಲಿ ಇರಲಿದ್ದಾರೆ.ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ಗೋವಾ ಹೀಗೆ ಹಲವೆಡೆ 120 ದಿನ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡಲು ತಂಡ ನಿರ್ಧರಿಸಿದ್ದು, ಇದೇ 12ರಂದು ಅದ್ಧೂರಿಯಾಗಿ ಮೋಷನ್ ಪೋಸ್ಟರ್ ಹಾಗೂ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ನಿಗದಿಪಡಿಸಿದೆ.ಮನುದಾಸಪ್ಪ ಛಾಯಾಗ್ರಹಣ, ವಿನೋದ್- ಶಿವು ಸಾಹಸ ನಿರ್ದೇಶನ ಚಿತ್ರಕ್ಕಿದೆ.