ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಬುಧವಾರ ಸಲ್ಲಿಕೆಯಾದ ಬೆನ್ನಲ್ಲೇವೈಷ್ಣೋದೇವಿಯ ದರ್ಶನಕ್ಕೆ ತೆರಳಿದ್ದಾರೆ. ಯಾತ್ರಾ ಸ್ಥಳದಲ್ಲಿನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು ಮತ್ತು ನೆಟ್ಟಿಗರು ಹರಕೆ ತೀರಿಸಲು ಶಿಲ್ಪಾ ಶೆಟ್ಟಿ ದೇವಿಯ ದರ್ಶನಕ್ಕೆ ತೆರಳಿರಬಹುದು ಎಂದು ಅಂದಾಜಿಸಿದ್ದಾರೆ.
ವೈಷ್ಣೋದೇವಿಯಗುಹೆಗೆ ಕುದುರೆಯ ಮೇಲೆ ಹೋರಟ ಶಿಲ್ಪಾ ಶೆಟ್ಟಿ, ದಾರಿ ಉದ್ದಕ್ಕೂ ’ಜೈ ಮಾತಾ’ ಎಂದು ಜಪಿಸುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಿಲ್ಪಾ ಶೆಟ್ಟಿ ಗೆಳತಿಯೊಂದಿಗೆ ಇಲ್ಲಿಗೆ ಬಂದಿದ್ದರು ಎಂದು ಜಮ್ಮು ಪೊಲೀಸರು ಮಾಹಿತಿ ನೀಡಿದ್ದಾರೆ.
’ರಾಜ್ ಕುಂದ್ರಾ ಅಶ್ಲೀಲ ವಿಡಿಯೊಗೆ ಸಂಬಂಧಪಟ್ಟಂತೆ ಹಾಗೂ ಹಾಟ್ಶಾಟ್ ಆ್ಯಪ್ಗಳ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ನನ್ನ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿರುತ್ತಿದೆ’ ಎಂಬ ಶಿಲ್ಪಾ ಶೆಟ್ಟಿಯ ಹೇಳಿಕೆ ದೋಷಾರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.