<p>ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಈ ಚಿತ್ರವನ್ನು ರಂಗಸ್ಥಳ ಸ್ಟುಡಿಯೊ ಬ್ಯಾನರ್ ಅಡಿ ಶೈನ್ ಶೆಟ್ಟಿ ಹಾಗೂ ದಿವಕರ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.</p><p>ಕರಾವಳಿ ಕರ್ನಾಟಕದ ಸಂಸ್ಕೃತಿ, ಹಾಸ್ಯಭಾವ, ಸಮುದಾಯ ಜೀವನದ ನಾಡಿನ ಸ್ಪಂದನ ಹೊತ್ತ ಕಥೆಯಿದು. ಬಸ್ಸಿನೊಂದಿಗೆ ಬದುಕು ಸಾಗಿಸುವ ಒಬ್ಬ ಸಾಮಾನ್ಯ ಬಸ್ ಚಾಲಕನ ಜೀವನದ ಕಥೆಯಾಗಿದೆ. ಬಸ್ ಚಾಲಕನ ಕರ್ತವ್ಯದಿಂದ ಆರಂಭವಾಗುವ ಚಿತ್ರವು ಭಾವನಾತ್ಮಕ ರೂಪಾಂತರಗೊಳ್ಳುತ್ತದೆ. ಈ ಚಿತ್ರವು ಉಡುಪಿ–ಮಂಗಳೂರು ಕರಾವಳಿಯ ಕಥಾಹಂದರ ಹೊಂದಿದೆ. ಪುರುಷನೊಬ್ಬ ನಿತ್ಯದ ಜಂಜಾಟ, ಸೋಲು ಸವಾಲುಗಳ ನಡುವೆ ಜೀವನ ಸಾಗಿಸುವುದನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ಚಿತ್ರತಂಡ ಮಾಹಿತಿ ನೀಡಿದೆ.</p>.<p>ಈ ಚಿತ್ರ ಕುರಿತು ಮಾತನಾಡಿರುವ ನಟ, ನಿರ್ಮಾಪಕ ಶೈನ್ ಶೆಟ್ಟಿ ಅವರು, ಕರಾವಳಿ ನೆಲ, ನೈಜ ಕಥೆಗಳನ್ನು ಹೇಳುವುದೇ ‘ರಂಗಸ್ಥಳ ಸ್ಟುಡಿಯೋಸ್ ಸಂಸ್ಥೆಯ ಉದ್ದೇಶವಾಗಿದೆ. ಈ ಚಿತ್ರದಿಂದ ನಮ್ಮ ಹುಟ್ಟೂರು, ಮಣ್ಣಿಗೆ ಗೌರವ ಸಲ್ಲಿಸುತ್ತೇವೆ. ಸಾಮಾನ್ಯ ಜನರ ಬದುಕಿಗೆ ಈ ಚಿತ್ರದ ಮೂಲಕ ನಮನ ಸಲ್ಲಿಸುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.</p><p>‘ಕಾಂತಾರ’, ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಕರಾವಳಿ ಮೂಲದ ಶೈನ್ ಶೆಟ್ಟಿ ಅವರು ‘ಶಂಕರಾಭರಣ’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸುತ್ತಿದ್ದಾರೆ. 'ಮಿಥ್ಯ' ಚಿತ್ರದ ಮೂಲಕ ಹಲವು ಚಲನಚಿತ್ರೋತ್ಸವಗಳಲ್ಲಿ ಗುರುತಿಸಿಕೊಂಡಿರುವ ಸುಮಂತ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. </p><p>ಈ ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಉದಿತ್ ಖುರಾನಾ ಅವರು ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಈ ಚಿತ್ರವನ್ನು ರಂಗಸ್ಥಳ ಸ್ಟುಡಿಯೊ ಬ್ಯಾನರ್ ಅಡಿ ಶೈನ್ ಶೆಟ್ಟಿ ಹಾಗೂ ದಿವಕರ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.</p><p>ಕರಾವಳಿ ಕರ್ನಾಟಕದ ಸಂಸ್ಕೃತಿ, ಹಾಸ್ಯಭಾವ, ಸಮುದಾಯ ಜೀವನದ ನಾಡಿನ ಸ್ಪಂದನ ಹೊತ್ತ ಕಥೆಯಿದು. ಬಸ್ಸಿನೊಂದಿಗೆ ಬದುಕು ಸಾಗಿಸುವ ಒಬ್ಬ ಸಾಮಾನ್ಯ ಬಸ್ ಚಾಲಕನ ಜೀವನದ ಕಥೆಯಾಗಿದೆ. ಬಸ್ ಚಾಲಕನ ಕರ್ತವ್ಯದಿಂದ ಆರಂಭವಾಗುವ ಚಿತ್ರವು ಭಾವನಾತ್ಮಕ ರೂಪಾಂತರಗೊಳ್ಳುತ್ತದೆ. ಈ ಚಿತ್ರವು ಉಡುಪಿ–ಮಂಗಳೂರು ಕರಾವಳಿಯ ಕಥಾಹಂದರ ಹೊಂದಿದೆ. ಪುರುಷನೊಬ್ಬ ನಿತ್ಯದ ಜಂಜಾಟ, ಸೋಲು ಸವಾಲುಗಳ ನಡುವೆ ಜೀವನ ಸಾಗಿಸುವುದನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ಚಿತ್ರತಂಡ ಮಾಹಿತಿ ನೀಡಿದೆ.</p>.<p>ಈ ಚಿತ್ರ ಕುರಿತು ಮಾತನಾಡಿರುವ ನಟ, ನಿರ್ಮಾಪಕ ಶೈನ್ ಶೆಟ್ಟಿ ಅವರು, ಕರಾವಳಿ ನೆಲ, ನೈಜ ಕಥೆಗಳನ್ನು ಹೇಳುವುದೇ ‘ರಂಗಸ್ಥಳ ಸ್ಟುಡಿಯೋಸ್ ಸಂಸ್ಥೆಯ ಉದ್ದೇಶವಾಗಿದೆ. ಈ ಚಿತ್ರದಿಂದ ನಮ್ಮ ಹುಟ್ಟೂರು, ಮಣ್ಣಿಗೆ ಗೌರವ ಸಲ್ಲಿಸುತ್ತೇವೆ. ಸಾಮಾನ್ಯ ಜನರ ಬದುಕಿಗೆ ಈ ಚಿತ್ರದ ಮೂಲಕ ನಮನ ಸಲ್ಲಿಸುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.</p><p>‘ಕಾಂತಾರ’, ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಕರಾವಳಿ ಮೂಲದ ಶೈನ್ ಶೆಟ್ಟಿ ಅವರು ‘ಶಂಕರಾಭರಣ’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸುತ್ತಿದ್ದಾರೆ. 'ಮಿಥ್ಯ' ಚಿತ್ರದ ಮೂಲಕ ಹಲವು ಚಲನಚಿತ್ರೋತ್ಸವಗಳಲ್ಲಿ ಗುರುತಿಸಿಕೊಂಡಿರುವ ಸುಮಂತ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. </p><p>ಈ ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಉದಿತ್ ಖುರಾನಾ ಅವರು ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>