ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.16ರಂದು ‘ಶಿವಾಜಿ ಸುರತ್ಕಲ್‌’ ಮರುಬಿಡುಗಡೆ

Last Updated 13 ಅಕ್ಟೋಬರ್ 2020, 6:15 IST
ಅಕ್ಷರ ಗಾತ್ರ

ರಮೇಶ್‌ ಅರವಿಂದ್‌ ಅಭಿನಯದ 101ನೇ ಚಿತ್ರ ‘ಶಿವಾಜಿಸುರತ್ಕಲ್‌– ದಿ ಕೇಸ್‌ ಆಫ್‌ ರಣಗಿರಿ ರಹಸ್ಯ’. ಇದೇ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ.

ಮಾರ್ಚ್‌ನಲ್ಲಿ ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವಾಗಲೇಕೊರೊನಾ ಲಾಕ್‌ಡೌನ್‌ ಬಿಸಿ ಇದಕ್ಕೂ ತಟ್ಟಿತ್ತು.ಒಳ್ಳೆಯ ಆದಾಯ ಗಳಿಕೆ ಇರುವಾಗಲೇ ಪ್ರದರ್ಶನ ರದ್ದಾದ ಪರಿಣಾಮ ಚಿತ್ರತಂಡಕ್ಕೆ ತೀವ್ರ ನಿರಾಶೆಯಾಯಿತು. ಪ್ರೇಕ್ಷಕರು ಕೂಡ ನಿರಾಶೆ ಅನುಭವಿಸುವಂತಾಯಿತು.ನಂತರ ಈ ಚಿತ್ರವನ್ನು ನಿರ್ಮಾಪಕರು ಜೀ5 ಒಟಿಟಿಯಲ್ಲಿ ಆ.7ರಂದು ಬಿಡುಗಡೆ ಮಾಡಿದ್ದರು.

ಆಕಾಶ್ ಶ್ರೀವತ್ಸ ನಿರ್ದೇಶಿಸಿದ ರೊಮ್ಯಾಂಟಿಕ್‌, ಆ್ಯಕ್ಷನ್‌, ಥ್ರಿಲ್ಲರ್‌ ಕಥನದ ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಮೊದಲ ಬಾರಿಗೆ ಪತ್ತೇದಾರಿಯಾಗಿ ನಟಿಸಿದ್ದಾರೆ.ರಾಧಿಕಾ ನಾರಾಯಣ್‌, ಆರೋಹಿ ನಾರಾಯಣ್‌ ತಾರಾಗಣದಲ್ಲಿದ್ದಾರೆ.

ಈ ಚಿತ್ರಕ್ಕೆ ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ. ಗುರುಪ್ರಸಾದ್ ಎಂ.ಜಿ. ಅವರ ಛಾಯಾಗ್ರಹಣ,ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT