ಅರುಂಧತಿ ನಾಗ್, ನಾಗತಿಹಳ್ಳಿ ಚಂದ್ರಶೇಖರ್, ಸಿ. ಬಸವಲಿಂಗಯ್ಯ, ಅರ್ಜುನ್ ಜನ್ಯ, ರೂಪಾ ಅಯ್ಯರ್, ಚಿಂತನ್ ಎ.ವಿ., ಕೆ.ಎಂ. ಪ್ರಕಾಶ್, ಸಂತೋಷ್ ರೈ ಪಾತಾಜೆ ಜ್ಯೂರಿಗಳಾಗಿದ್ದಾರೆ. ಯೋಗರಾಜ್ ಭಟ್ ಸ್ಪರ್ಧೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನಿರ್ದೇಶಕಿ ರೂಪಾ ಅಯ್ಯರ್, ‘ಕಿರುಚಿತ್ರ ನಿರ್ಮಿಸುವುದು ಕೂಡ ಸುಲಭವಲ್ಲ. ಇದಕ್ಕೂ ಕೂಡ ಸಾಕಷ್ಟು ಹಣ ಬೇಕಾಗುತ್ತದೆ. ದೊಡ್ಡ ಚಿತ್ರಗಳನ್ನು ತಯಾರಿಸುವಷ್ಟೇ ಪರಿಶ್ರಮವೂ ಇದಕ್ಕೆ ಬೇಕು’ ಎಂದರು.