<p><strong>ಬೆಂಗಳೂರು: </strong>ಚಿತ್ರೋದ್ಯಮದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಏಕಗವಾಕ್ಷಿಯ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಉದ್ಯಮಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ಡಾ.ಎಲ್.ಮುರುಗನ್ ಹೇಳಿದರು.</p>.<p>ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರೋದ್ಯಮದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ‘ಚಿತ್ರೋದ್ಯಮಕ್ಕೆ ಸಂಬಂಧಿಸಿ ಯಾವುದೇ ಪರವಾನಗಿ ಪ್ರಕ್ರಿಯೆಗಳಿಗೆ ಒಂದೇ ಪೋರ್ಟಲ್ ಇದ್ದು, ಅದರಲ್ಲಿ ಅರ್ಜಿ ಸಲ್ಲಿಸಿದರೆ ವಿಳಂಬವಿಲ್ಲದೇ ಪರವಾನಗಿ ಲಭಿಸುತ್ತವೆ’ ಎಂದರು.</p>.<p>ಕನ್ನಡ ಚಿತ್ರರಂಗದಿಂದ ಪ್ರಸಕ್ತ ಸಾಲಿನಲ್ಲಿ 234 ಚಿತ್ರಗಳು ಪ್ರಮಾಣೀಕರಣಕ್ಕಾಗಿ ಬಂದಿವೆ. 226ಕ್ಕೆ ಪ್ರಮಾಣೀಕರಣ ನೀಡಲಾಗಿದೆ. 8 ಚಿತ್ರಗಳು ದಾಖಲೆಗಳ ಕಾರಣಕ್ಕೆ ಬಾಕಿ ಉಳಿದಿವೆ. ಇಲ್ಲಿನ ಚಿತ್ರೋದ್ಯಮದ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಸ್ಪಂದಿಸುವುದಾಗಿ ಹೇಳಿದರು.</p>.<p class="Subhead"><strong>ಚಿತ್ರೋದ್ಯಮದ ಬೇಡಿಕೆಗಳೇನು?:</strong></p>.<p><span class="Bullet">l</span>ಚಲನಚಿತ್ರ ಪ್ರಮಾಣೀಕರಣ ಸಂಬಂಧಿಸಿ ಇಲ್ಲಿನ ಸೆನ್ಸಾರ್ ಮಂಡಳಿಯಲ್ಲಿ ಹಿಂದಿ ಚಿತ್ರಗಳ ಪ್ರಮಾಣೀಕರಣ ವ್ಯವಸ್ಥೆಯನ್ನೂ ತರಬೇಕು.</p>.<p><span class="Bullet">l</span>ಸೆನ್ಸಾರ್ ಮಂಡಳಿಯ ಹೆಚ್ಚುವರಿ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು.</p>.<p><span class="Bullet">l</span>ಚಿತ್ರಗಳಲ್ಲಿ ಪ್ರಾಣಿಗಳ ಬಳಕೆಗೆ ಸಂಬಂಧಿಸಿ ಪ್ರಮಾಣೀಕರಿಸಲು ಸ್ಥಳೀಯ ಪಶುವೈದ್ಯರ ನೇಮಕಾತಿಗೆ ಅವಕಾಶ ಕೊಡಬೇಕು. ಇಲ್ಲಿ ಸಚಿವಾಲಯದ ಕಚೇರಿ ತೆರೆಯಬೇಕು. (ಈಗ ಪ್ರಾಣಿಗಳ ಬಳಕೆ ಸಂಬಂಧಿಸಿ ಪರಿಶೀಲನೆಗೆ) ಸೆನ್ಸಾರ್ ಸಂಬಂಧಿಸಿದ ಕಚೇರಿ ಹರಿಯಾಣದಲ್ಲಿದೆ.</p>.<p><span class="Bullet">l</span>ಅರ್ಹತೆ ಇಲ್ಲದವರು, ಸಿನಿಮಾ ಬಗ್ಗೆ ಜ್ಞಾನ ಇಲ್ಲದವರು ಸೆನ್ಸಾರ್ ಮಂಡಳಿ ಸದಸ್ಯರಾಗುವುದು ನಿಲ್ಲಬೇಕು.</p>.<p><span class="Bullet">l</span>ಚಿತ್ರೀಕರಣ ಪರವಾನಗಿ ಶುಲ್ಕವನ್ನು ಇಳಿಸಬೇಕು.</p>.<p><span class="Bullet">l</span>ದೂರದರ್ಶನದಲ್ಲಿ ಇತರ ವಾಣಿಜ್ಯ ಚಿತ್ರಗಳನ್ನೂ ಪ್ರಸಾರ ಮಾಡಬೇಕು. ಇದರಿಂದ ಟಿವಿ ಹಕ್ಕುಗಳ ಮಾರಾಟದಿಂದ ನಿರ್ಮಾಪಕರಿಗೆ ಆರ್ಥಿಕ ಲಾಭ ಸಿಗಲಿದೆ.</p>.<p><span class="Bullet">l</span>ಜಿಎಸ್ಟಿ ಪಾವತಿ ಸಂಬಂಧಿಸಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಅದನ್ನು ನಿವಾರಿಸಲು ಸಮಿತಿ ರಚಿಸುವುದಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ಶೀಘ್ರ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸಬೇಕು.</p>.<p>ನಟ ಶಿವರಾಜ್ಕುಮಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್, ಕಾರ್ಯದರ್ಶಿ ಎನ್.ಎಂ. ಸುರೇಶ್, ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ.ವಿ.ಗುಪ್ತಾ, ಚಿನ್ನೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಚಿತ್ರೋದ್ಯಮದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಏಕಗವಾಕ್ಷಿಯ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಉದ್ಯಮಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ಡಾ.ಎಲ್.ಮುರುಗನ್ ಹೇಳಿದರು.</p>.<p>ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರೋದ್ಯಮದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ‘ಚಿತ್ರೋದ್ಯಮಕ್ಕೆ ಸಂಬಂಧಿಸಿ ಯಾವುದೇ ಪರವಾನಗಿ ಪ್ರಕ್ರಿಯೆಗಳಿಗೆ ಒಂದೇ ಪೋರ್ಟಲ್ ಇದ್ದು, ಅದರಲ್ಲಿ ಅರ್ಜಿ ಸಲ್ಲಿಸಿದರೆ ವಿಳಂಬವಿಲ್ಲದೇ ಪರವಾನಗಿ ಲಭಿಸುತ್ತವೆ’ ಎಂದರು.</p>.<p>ಕನ್ನಡ ಚಿತ್ರರಂಗದಿಂದ ಪ್ರಸಕ್ತ ಸಾಲಿನಲ್ಲಿ 234 ಚಿತ್ರಗಳು ಪ್ರಮಾಣೀಕರಣಕ್ಕಾಗಿ ಬಂದಿವೆ. 226ಕ್ಕೆ ಪ್ರಮಾಣೀಕರಣ ನೀಡಲಾಗಿದೆ. 8 ಚಿತ್ರಗಳು ದಾಖಲೆಗಳ ಕಾರಣಕ್ಕೆ ಬಾಕಿ ಉಳಿದಿವೆ. ಇಲ್ಲಿನ ಚಿತ್ರೋದ್ಯಮದ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಸ್ಪಂದಿಸುವುದಾಗಿ ಹೇಳಿದರು.</p>.<p class="Subhead"><strong>ಚಿತ್ರೋದ್ಯಮದ ಬೇಡಿಕೆಗಳೇನು?:</strong></p>.<p><span class="Bullet">l</span>ಚಲನಚಿತ್ರ ಪ್ರಮಾಣೀಕರಣ ಸಂಬಂಧಿಸಿ ಇಲ್ಲಿನ ಸೆನ್ಸಾರ್ ಮಂಡಳಿಯಲ್ಲಿ ಹಿಂದಿ ಚಿತ್ರಗಳ ಪ್ರಮಾಣೀಕರಣ ವ್ಯವಸ್ಥೆಯನ್ನೂ ತರಬೇಕು.</p>.<p><span class="Bullet">l</span>ಸೆನ್ಸಾರ್ ಮಂಡಳಿಯ ಹೆಚ್ಚುವರಿ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು.</p>.<p><span class="Bullet">l</span>ಚಿತ್ರಗಳಲ್ಲಿ ಪ್ರಾಣಿಗಳ ಬಳಕೆಗೆ ಸಂಬಂಧಿಸಿ ಪ್ರಮಾಣೀಕರಿಸಲು ಸ್ಥಳೀಯ ಪಶುವೈದ್ಯರ ನೇಮಕಾತಿಗೆ ಅವಕಾಶ ಕೊಡಬೇಕು. ಇಲ್ಲಿ ಸಚಿವಾಲಯದ ಕಚೇರಿ ತೆರೆಯಬೇಕು. (ಈಗ ಪ್ರಾಣಿಗಳ ಬಳಕೆ ಸಂಬಂಧಿಸಿ ಪರಿಶೀಲನೆಗೆ) ಸೆನ್ಸಾರ್ ಸಂಬಂಧಿಸಿದ ಕಚೇರಿ ಹರಿಯಾಣದಲ್ಲಿದೆ.</p>.<p><span class="Bullet">l</span>ಅರ್ಹತೆ ಇಲ್ಲದವರು, ಸಿನಿಮಾ ಬಗ್ಗೆ ಜ್ಞಾನ ಇಲ್ಲದವರು ಸೆನ್ಸಾರ್ ಮಂಡಳಿ ಸದಸ್ಯರಾಗುವುದು ನಿಲ್ಲಬೇಕು.</p>.<p><span class="Bullet">l</span>ಚಿತ್ರೀಕರಣ ಪರವಾನಗಿ ಶುಲ್ಕವನ್ನು ಇಳಿಸಬೇಕು.</p>.<p><span class="Bullet">l</span>ದೂರದರ್ಶನದಲ್ಲಿ ಇತರ ವಾಣಿಜ್ಯ ಚಿತ್ರಗಳನ್ನೂ ಪ್ರಸಾರ ಮಾಡಬೇಕು. ಇದರಿಂದ ಟಿವಿ ಹಕ್ಕುಗಳ ಮಾರಾಟದಿಂದ ನಿರ್ಮಾಪಕರಿಗೆ ಆರ್ಥಿಕ ಲಾಭ ಸಿಗಲಿದೆ.</p>.<p><span class="Bullet">l</span>ಜಿಎಸ್ಟಿ ಪಾವತಿ ಸಂಬಂಧಿಸಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಅದನ್ನು ನಿವಾರಿಸಲು ಸಮಿತಿ ರಚಿಸುವುದಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ಶೀಘ್ರ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸಬೇಕು.</p>.<p>ನಟ ಶಿವರಾಜ್ಕುಮಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್, ಕಾರ್ಯದರ್ಶಿ ಎನ್.ಎಂ. ಸುರೇಶ್, ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ.ವಿ.ಗುಪ್ತಾ, ಚಿನ್ನೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>