ಎಸ್ಪಿಬಿ ಅವರ ಹುಟ್ಟೂರು ನಲ್ಲೂರು. ತಂದೆ ಸಾಂಬಮೂರ್ತಿ ಮತ್ತು ತಾಯಿ ಶಕುಂತಲಮ್ಮ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಕೊತ್ತಪೇಟದ ಶಿಲ್ಪಿ ರಾಜ್ಕುಮಾರ್ ಅವರಿಗೆ ತನ್ನ ತಂದೆ–ತಾಯಿಯ ಪ್ರತಿಮೆಗಳನ್ನು ಕೆತ್ತನೆ ಮಾಡಿಕೊಡುವಂತೆ ಬಾಲು ಸೂಚಿಸಿದ್ದರು. ಪೋಷಕರ ಪ್ರತಿಮೆಗಳನ್ನು ನಲ್ಲೂರಿನ ತನ್ನ ಪೂರ್ವಿಕರ ಮನೆ ಇರುವ ತಿಪ್ಪರಾಜು ವಾರಿ ರಸ್ತೆಯಲ್ಲಿ ಪ್ರತಿಷ್ಠಾಪಿಸಲು ಅವರು ನಿರ್ಧರಿಸಿದ್ದರು. ಆದರೆ, ಆಸೆ ಮಾತ್ರ ಕೈಗೂಡಿಲ್ಲ.