ಕುರುಕ್ಷೇತ್ರ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವುದು ಹರಿಕೃಷ್ಣ. ಈ ಚಿತ್ರದಲ್ಲಿ ಹಾಡೊಂದರನ್ನು ವಾಣಿ ಹಾಡಿದ್ದರಂತೆ. ಆದರೆ, ಬೇರೊಬ್ಬರಿಂದ ಅದೇ ಹಾಡನ್ನು ಹಾಡಿಸಿ ಸಿನಿಮಾದ ಆಡಿಯೊ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 15ರಂದು ‘ರಾಂಧವ’ ಚಿತ್ರ ತೆರೆಕಾಣುತ್ತಿದ್ದು, ಹರಿಕೃಷ್ಣ ಅವರ ಶಿಷ್ಯ ಶಶಾಂಕ್ ಶೇಷಗಿರಿ ಇದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾದಲ್ಲೂ ಒಂದು ಹಾಡಿಗೆ ವಾಣಿ ಧ್ವನಿಯಾಗಿದ್ದರಂತೆ. ಆದರೆ, ಆ ಹಾಡನ್ನೂ ತೆಗೆದುಹಾಕಲಾಗಿದೆ ಎನ್ನುವುದು ಅವರ ಆರೋಪ.