ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಅನುಮತಿ ಪಡೆದು ಒಟ್ಟು ಹತ್ತು ಬಸ್ಸುಗಳು ಥಾಣೆಯಿಂದ ಕಲಬುರ್ಗಿಯ ಕಡೆ ಸೋಮವಾರವೇ ಹೊರಟಿವೆ. ಒಟ್ಟು 350 ಕಾರ್ಮಿಕರು ಈ ಬಸ್ಸುಗಳಲ್ಲಿ ಇದ್ದರು. ‘ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿ ಭಾರತೀಯನೂ ತನ್ನ ಕುಟುಂಬದ ಸದಸ್ಯರ ಜೊತೆ ಇರಬೇಕು. ಹಾಗಾಗಿ, ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಅನುವಾಗುವಂತೆ ನಾನು ಸಂಬಂಧಪಟ್ಟವರಿಂದ ಅನುಮತಿ ಪಡೆದುಕೊಂಡೆ’ ಎಂದು ಸೋನು ಹೇಳುತ್ತಾರೆ.