<p>ಸುದೀಪ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದ ‘ವಿಷ್ಣುವರ್ಧನ’ ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಜೀವ ತುಂಬಿದ್ದವರು ಬಾಲಿವುಡ್ ನಟ ಸೋನು ಸೂದ್. ಈಗ ಅವರು ಕರ್ನಾಟಕದ ವಲಸೆ ಕಾರ್ಮಿಕರ ಪಾಲಿಗೆ ನಾಯಕನಂತೆ ಕಾಣಿಸಿದ್ದಾರೆ. ಮುಂಬೈನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ಮರಳಿ ಗೂಡಿಗೆ ಬರಲು ನೆರವಾಗಿದ್ದಾರೆ.</p>.<p>ಕಲಬುರ್ಗಿಯ ಕಾರ್ಮಿಕರಿಗೆ ಊರಿಗೆ ಮರಳಲು ಸೋನು ಅವರು ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆಯಲ್ಲೇ, ಈ ಕಾರ್ಮಿಕರಿಗಾಗಿ ಸೋನು ಅವರು ಊಟದ ಕಿಟ್ನ ವ್ಯವಸ್ಥೆ ಕೂಡ ಮಾಡಿದ್ದಾರೆ.</p>.<p>ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಅನುಮತಿ ಪಡೆದು ಒಟ್ಟು ಹತ್ತು ಬಸ್ಸುಗಳು ಥಾಣೆಯಿಂದ ಕಲಬುರ್ಗಿಯ ಕಡೆ ಸೋಮವಾರವೇ ಹೊರಟಿವೆ. ಒಟ್ಟು 350 ಕಾರ್ಮಿಕರು ಈ ಬಸ್ಸುಗಳಲ್ಲಿ ಇದ್ದರು. ‘ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿ ಭಾರತೀಯನೂ ತನ್ನ ಕುಟುಂಬದ ಸದಸ್ಯರ ಜೊತೆ ಇರಬೇಕು. ಹಾಗಾಗಿ, ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಅನುವಾಗುವಂತೆ ನಾನು ಸಂಬಂಧಪಟ್ಟವರಿಂದ ಅನುಮತಿ ಪಡೆದುಕೊಂಡೆ’ ಎಂದು ಸೋನು ಹೇಳುತ್ತಾರೆ.</p>.<p>‘ಅವರು ತಮ್ಮ ಊರುಗಳಿಗೆ ತೆರಳಲು ಅಗತ್ಯದ ದಾಖಲೆಗಳನ್ನು ಹೊಂದಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಮಾಡಿಕೊಟ್ಟರು. ಕರ್ನಾಟಕದವರು ತಮ್ಮವರನ್ನು ಬರಮಾಡಿಕೊಂಡರು’ ಎಂದು ಸೋನು ಎರಡೂ ಸರ್ಕಾರಗಳ ಬಗ್ಗೆ ಮೆಚ್ಚುಗೆಯ ಮಾತು ಹೇಳಿದ್ದಾರೆ.</p>.<p>ಈಚೆಗೆ ತೆರೆಕಂಡ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಸೋನು, ಅರ್ಜುನನಾಗಿ ನಟಿಸಿದ್ದರು. ಈಗ ಅವರು ವಲಸೆ ಕಾರ್ಮಿಕರ ಪಾಲಿಗೆ ಧರ್ಮರಾಯನಂತೆ ನೆರವಿಗೆ ಬಂದಿದ್ದಾರೆ.</p>.<p>‘ಬೇರೆ ರಾಜ್ಯಗಳ ಕಾರ್ಮಿಕರಿಗೂ ಅವರ ಊರುಗಳಿಗೆ ತೆರಳಲು ಸಹಾಯ ಮಾಡುವ ಕೆಲಸ ಮುಂದುವರಿಸುವೆ’ ಎಂದು ಸೋನು ಹೇಳಿದ್ದಾರೆ. ವಲಸೆ ಕಾರ್ಮಿಕರ ಸಂಕಷ್ಟ ಕಂಡು ಸೋನು ಅವರು ಭಾವುಕರಾಗಿದ್ದರಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುದೀಪ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದ ‘ವಿಷ್ಣುವರ್ಧನ’ ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಜೀವ ತುಂಬಿದ್ದವರು ಬಾಲಿವುಡ್ ನಟ ಸೋನು ಸೂದ್. ಈಗ ಅವರು ಕರ್ನಾಟಕದ ವಲಸೆ ಕಾರ್ಮಿಕರ ಪಾಲಿಗೆ ನಾಯಕನಂತೆ ಕಾಣಿಸಿದ್ದಾರೆ. ಮುಂಬೈನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರಿಗೆ ಮರಳಿ ಗೂಡಿಗೆ ಬರಲು ನೆರವಾಗಿದ್ದಾರೆ.</p>.<p>ಕಲಬುರ್ಗಿಯ ಕಾರ್ಮಿಕರಿಗೆ ಊರಿಗೆ ಮರಳಲು ಸೋನು ಅವರು ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆಯಲ್ಲೇ, ಈ ಕಾರ್ಮಿಕರಿಗಾಗಿ ಸೋನು ಅವರು ಊಟದ ಕಿಟ್ನ ವ್ಯವಸ್ಥೆ ಕೂಡ ಮಾಡಿದ್ದಾರೆ.</p>.<p>ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಅನುಮತಿ ಪಡೆದು ಒಟ್ಟು ಹತ್ತು ಬಸ್ಸುಗಳು ಥಾಣೆಯಿಂದ ಕಲಬುರ್ಗಿಯ ಕಡೆ ಸೋಮವಾರವೇ ಹೊರಟಿವೆ. ಒಟ್ಟು 350 ಕಾರ್ಮಿಕರು ಈ ಬಸ್ಸುಗಳಲ್ಲಿ ಇದ್ದರು. ‘ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರತಿ ಭಾರತೀಯನೂ ತನ್ನ ಕುಟುಂಬದ ಸದಸ್ಯರ ಜೊತೆ ಇರಬೇಕು. ಹಾಗಾಗಿ, ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಲು ಅನುವಾಗುವಂತೆ ನಾನು ಸಂಬಂಧಪಟ್ಟವರಿಂದ ಅನುಮತಿ ಪಡೆದುಕೊಂಡೆ’ ಎಂದು ಸೋನು ಹೇಳುತ್ತಾರೆ.</p>.<p>‘ಅವರು ತಮ್ಮ ಊರುಗಳಿಗೆ ತೆರಳಲು ಅಗತ್ಯದ ದಾಖಲೆಗಳನ್ನು ಹೊಂದಿಸುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಮಾಡಿಕೊಟ್ಟರು. ಕರ್ನಾಟಕದವರು ತಮ್ಮವರನ್ನು ಬರಮಾಡಿಕೊಂಡರು’ ಎಂದು ಸೋನು ಎರಡೂ ಸರ್ಕಾರಗಳ ಬಗ್ಗೆ ಮೆಚ್ಚುಗೆಯ ಮಾತು ಹೇಳಿದ್ದಾರೆ.</p>.<p>ಈಚೆಗೆ ತೆರೆಕಂಡ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ಸೋನು, ಅರ್ಜುನನಾಗಿ ನಟಿಸಿದ್ದರು. ಈಗ ಅವರು ವಲಸೆ ಕಾರ್ಮಿಕರ ಪಾಲಿಗೆ ಧರ್ಮರಾಯನಂತೆ ನೆರವಿಗೆ ಬಂದಿದ್ದಾರೆ.</p>.<p>‘ಬೇರೆ ರಾಜ್ಯಗಳ ಕಾರ್ಮಿಕರಿಗೂ ಅವರ ಊರುಗಳಿಗೆ ತೆರಳಲು ಸಹಾಯ ಮಾಡುವ ಕೆಲಸ ಮುಂದುವರಿಸುವೆ’ ಎಂದು ಸೋನು ಹೇಳಿದ್ದಾರೆ. ವಲಸೆ ಕಾರ್ಮಿಕರ ಸಂಕಷ್ಟ ಕಂಡು ಸೋನು ಅವರು ಭಾವುಕರಾಗಿದ್ದರಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>