<p><strong>ತಿರುವಂತಪುರ</strong>: ಇಂದು ಹುಟ್ಟುಹಬ್ಬದ ಸಂಭ್ರದಲ್ಲಿದ್ದ ಮಲಯಾಳ ನಟ, ನಿರ್ದೇಶಕ ಧ್ಯಾನ್ ಶ್ರೀನಿವಾಸನ್ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಧ್ಯಾನ್ ಅವರ ತಂದೆ, ಮಲಯಾಳದ ಪ್ರಸಿದ್ಧ ನಟ, ನಿರ್ಮಾಪಕ, ಬರಹಗಾರ ಶ್ರೀನಿವಾಸನ್ ಅವರು ನಿಧನರಾಗಿದ್ದಾರೆ.</p><p>ತಂದೆಯಂತೆ ಧ್ಯಾನ್ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮಲಯಾಳ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ‘ತಿರ’ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದ ಧ್ಯಾನ್, 2019ರಲ್ಲಿ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಧ್ಯಾನ್ ಅವರು ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.</p><p>ಕಿರಿಯ ಮಗ ಧ್ಯಾನ್ ಅವರೊಂದಿಗೆ ಶ್ರೀನಿವಾಸ್ ವಿಶೇಷ ಬಾಂಧ್ಯವನ್ನು ಹೊಂದಿದ್ದರು. ಕೊಚ್ಚಿಯಲ್ಲಿ ಮಗನ ಕುಟುಂಬದೊಂದಿಗೆ ಶ್ರೀನಿವಾಸನ್ ನೆಲೆಸಿದ್ದರು.</p><p>ಶ್ರೀನಿವಾಸನ್ ಅವರ ಹಿರಿಯ ಮಗ ವಿನೀತ್ ಶ್ರೀನಿವಾಸನ್ ಕೂಡ ಜನಪ್ರಿಯ ನಿರ್ದೇಶಕರಾಗಿದ್ದಾರೆ. ಧ್ಯಾನ್ ಅವರ ಮೊದಲ ಚಿತ್ರ ‘ತಿರಾ’ಕ್ಕೆ ವಿನೀತ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದರು.</p><p><strong>ಇಹಲೋಕಕ್ಕೆ ಶ್ರೀನಿವಾಸನ್:</strong></p><p>ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು ಎರ್ನಾಕುಲಂನ ತಾಲ್ಲೂಕು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳಿದ್ದಾರೆ.</p><p>1977ರಲ್ಲಿ ಪಿ.ಎ. ಬ್ಯಾಕರ್ ನಿರ್ದೇಶನದ ಮಣಿಮುಳಕ್ಕಂ ಚಿತ್ರದ ಮೂಲಕ ಶ್ರೀನಿವಾಸನ್ ಮಲಯಾಳ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾ ಶ್ರೀನಿವಾಸನ್ಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.</p><p>1984ರಲ್ಲಿ ‘ಒಡರುತ್ತು ಅಮ್ಮಾವ ಆಲಾರಿಯಂ’ ಚಿತ್ರದ ಮೂಲಕ ಉತ್ತಮ ಬರಹಗಾರರಾಗಿ ಶ್ರೀನಿವಾಸನ್ ಗುರುತಿಸಿಕೊಂಡಿದ್ದರು.</p><p>ಶ್ರೀನಿವಾಸನ್ ಅವರು ತೀಕ್ಷ್ಣವಾದ ಸಾಮಾಜಿಕ ವ್ಯಾಖ್ಯಾನವನ್ನು ಸುಲಭವಾಗಿ ಅರ್ಥೈಸಬಹುದಾದ ನಿಟ್ಟಿನಲ್ಲಿ ಹಾಸ್ಯಮಯವಾಗಿ ಕಥೆಗಳನ್ನು ಹೆಣೆಯುವ ಮೂಲಕ ಮಲಯಾಳ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವಂತಪುರ</strong>: ಇಂದು ಹುಟ್ಟುಹಬ್ಬದ ಸಂಭ್ರದಲ್ಲಿದ್ದ ಮಲಯಾಳ ನಟ, ನಿರ್ದೇಶಕ ಧ್ಯಾನ್ ಶ್ರೀನಿವಾಸನ್ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಧ್ಯಾನ್ ಅವರ ತಂದೆ, ಮಲಯಾಳದ ಪ್ರಸಿದ್ಧ ನಟ, ನಿರ್ಮಾಪಕ, ಬರಹಗಾರ ಶ್ರೀನಿವಾಸನ್ ಅವರು ನಿಧನರಾಗಿದ್ದಾರೆ.</p><p>ತಂದೆಯಂತೆ ಧ್ಯಾನ್ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಮಲಯಾಳ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ‘ತಿರ’ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದ ಧ್ಯಾನ್, 2019ರಲ್ಲಿ ನಿರ್ದೇಶಕನಾಗಿ ಬಡ್ತಿ ಪಡೆದಿದ್ದರು. ಧ್ಯಾನ್ ಅವರು ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.</p><p>ಕಿರಿಯ ಮಗ ಧ್ಯಾನ್ ಅವರೊಂದಿಗೆ ಶ್ರೀನಿವಾಸ್ ವಿಶೇಷ ಬಾಂಧ್ಯವನ್ನು ಹೊಂದಿದ್ದರು. ಕೊಚ್ಚಿಯಲ್ಲಿ ಮಗನ ಕುಟುಂಬದೊಂದಿಗೆ ಶ್ರೀನಿವಾಸನ್ ನೆಲೆಸಿದ್ದರು.</p><p>ಶ್ರೀನಿವಾಸನ್ ಅವರ ಹಿರಿಯ ಮಗ ವಿನೀತ್ ಶ್ರೀನಿವಾಸನ್ ಕೂಡ ಜನಪ್ರಿಯ ನಿರ್ದೇಶಕರಾಗಿದ್ದಾರೆ. ಧ್ಯಾನ್ ಅವರ ಮೊದಲ ಚಿತ್ರ ‘ತಿರಾ’ಕ್ಕೆ ವಿನೀತ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದರು.</p><p><strong>ಇಹಲೋಕಕ್ಕೆ ಶ್ರೀನಿವಾಸನ್:</strong></p><p>ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು ಎರ್ನಾಕುಲಂನ ತಾಲ್ಲೂಕು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳಿದ್ದಾರೆ.</p><p>1977ರಲ್ಲಿ ಪಿ.ಎ. ಬ್ಯಾಕರ್ ನಿರ್ದೇಶನದ ಮಣಿಮುಳಕ್ಕಂ ಚಿತ್ರದ ಮೂಲಕ ಶ್ರೀನಿವಾಸನ್ ಮಲಯಾಳ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾ ಶ್ರೀನಿವಾಸನ್ಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.</p><p>1984ರಲ್ಲಿ ‘ಒಡರುತ್ತು ಅಮ್ಮಾವ ಆಲಾರಿಯಂ’ ಚಿತ್ರದ ಮೂಲಕ ಉತ್ತಮ ಬರಹಗಾರರಾಗಿ ಶ್ರೀನಿವಾಸನ್ ಗುರುತಿಸಿಕೊಂಡಿದ್ದರು.</p><p>ಶ್ರೀನಿವಾಸನ್ ಅವರು ತೀಕ್ಷ್ಣವಾದ ಸಾಮಾಜಿಕ ವ್ಯಾಖ್ಯಾನವನ್ನು ಸುಲಭವಾಗಿ ಅರ್ಥೈಸಬಹುದಾದ ನಿಟ್ಟಿನಲ್ಲಿ ಹಾಸ್ಯಮಯವಾಗಿ ಕಥೆಗಳನ್ನು ಹೆಣೆಯುವ ಮೂಲಕ ಮಲಯಾಳ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>