<p><strong>ಸುಂಟಿಕೊಪ್ಪ (ಕೊಡಗು): </strong>ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ, ಕಿರುತೆರೆ ನಟಿ ಸೌಜನ್ಯಾ (ಸವಿ ಮಾದಪ್ಪ) ಅವರ ಅಂತ್ಯಕ್ರಿಯೆ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ ಅಭಿಮಾನಿಗಳು ಹಾಗೂ ಕುಟುಂಬಸ್ಥರ ಆಕ್ರಂದನದ ನಡುವೆ ಶುಕ್ರವಾರ ಸಂಜೆ ನೆರವೇರಿತು.</p>.<p>ಕುಶಾಲನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿದ ನಂತರ ಅಂದಗೋವೆಗೆ ಮೃತದೇಹ ತರಲಾಯಿತು.</p>.<p>ಆಂಬುಲೆನ್ಸ್ನಿಂದ ಮೃತದೇಹವನ್ನು ಕೆಳಗೆಇಳಿಸುತ್ತಿದ್ದಂತೆ ಅವರ ತಾಯಿ ರೇಣುಕಾ, ‘ನಮ್ಮನೆಲ್ಲ ಇಷ್ಟು ಬೇಗ ಬಿಟ್ಟು ಹೋದೆಯಲ್ಲ; ಯಾಕೆ ಈ ತಪ್ಪು ಮಾಡಿದೆ’ ಎಂದು ಕುಟುಂಬ ಸದಸ್ಯರು ಕಣ್ಣೀರು ಹಾಕಿದರು.</p>.<p>ಚಿಕ್ಕಂಡ ಕುಟುಂಬದ ಐನ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವಿವಾಹಿತಳಾಗಿದ್ದ ಕಾರಣಕ್ಕೆ ಕೊಡವ ಸಂಪ್ರದಾಯದಂತೆ ಬಾಳೆ ದಿಂಡಿನೊಂದಿಗೆ ವಿವಾಹ ಮಾಡಿ ಅಂತ್ಯಕ್ರಿಯೆ ವಿಧಿ–ವಿಧಾನ ನೆರವೇರಿಸಲಾಯಿತು.</p>.<p>ನಂತರ, ಅಂದಗೋವೆ ಗ್ರಾಮದ ಚಿಕ್ಕಂಡ ಕುಟುಂಬಸ್ಥರ ಸ್ವಂತ ಜಾಗದಲ್ಲಿ ಕೊಡವ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಿತು.</p>.<p>‘ಸೌಜನ್ಯ ಊರಿಗೆ ಬಂದಾಗ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತಿದ್ದರು’ ಎಂದು ಸ್ಥಳೀಯರಾದ ರಂಜಿನಿ ಕಂಬನಿ ಮಿಡಿದರು.</p>.<p>ಇದನ್ನೂ ಓದಿ..<strong> <a href="https://www.prajavani.net/entertainment/tv/tv-actress-soujanya-committed-suicide-871337.html">ಡೆತ್ ನೋಟ್ ಬರೆದಿಟ್ಟು ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ</a></strong><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ (ಕೊಡಗು): </strong>ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ, ಕಿರುತೆರೆ ನಟಿ ಸೌಜನ್ಯಾ (ಸವಿ ಮಾದಪ್ಪ) ಅವರ ಅಂತ್ಯಕ್ರಿಯೆ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ ಅಭಿಮಾನಿಗಳು ಹಾಗೂ ಕುಟುಂಬಸ್ಥರ ಆಕ್ರಂದನದ ನಡುವೆ ಶುಕ್ರವಾರ ಸಂಜೆ ನೆರವೇರಿತು.</p>.<p>ಕುಶಾಲನಗರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿದ ನಂತರ ಅಂದಗೋವೆಗೆ ಮೃತದೇಹ ತರಲಾಯಿತು.</p>.<p>ಆಂಬುಲೆನ್ಸ್ನಿಂದ ಮೃತದೇಹವನ್ನು ಕೆಳಗೆಇಳಿಸುತ್ತಿದ್ದಂತೆ ಅವರ ತಾಯಿ ರೇಣುಕಾ, ‘ನಮ್ಮನೆಲ್ಲ ಇಷ್ಟು ಬೇಗ ಬಿಟ್ಟು ಹೋದೆಯಲ್ಲ; ಯಾಕೆ ಈ ತಪ್ಪು ಮಾಡಿದೆ’ ಎಂದು ಕುಟುಂಬ ಸದಸ್ಯರು ಕಣ್ಣೀರು ಹಾಕಿದರು.</p>.<p>ಚಿಕ್ಕಂಡ ಕುಟುಂಬದ ಐನ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವಿವಾಹಿತಳಾಗಿದ್ದ ಕಾರಣಕ್ಕೆ ಕೊಡವ ಸಂಪ್ರದಾಯದಂತೆ ಬಾಳೆ ದಿಂಡಿನೊಂದಿಗೆ ವಿವಾಹ ಮಾಡಿ ಅಂತ್ಯಕ್ರಿಯೆ ವಿಧಿ–ವಿಧಾನ ನೆರವೇರಿಸಲಾಯಿತು.</p>.<p>ನಂತರ, ಅಂದಗೋವೆ ಗ್ರಾಮದ ಚಿಕ್ಕಂಡ ಕುಟುಂಬಸ್ಥರ ಸ್ವಂತ ಜಾಗದಲ್ಲಿ ಕೊಡವ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಿತು.</p>.<p>‘ಸೌಜನ್ಯ ಊರಿಗೆ ಬಂದಾಗ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಮಾತನಾಡುತ್ತಿದ್ದರು’ ಎಂದು ಸ್ಥಳೀಯರಾದ ರಂಜಿನಿ ಕಂಬನಿ ಮಿಡಿದರು.</p>.<p>ಇದನ್ನೂ ಓದಿ..<strong> <a href="https://www.prajavani.net/entertainment/tv/tv-actress-soujanya-committed-suicide-871337.html">ಡೆತ್ ನೋಟ್ ಬರೆದಿಟ್ಟು ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ</a></strong><br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>