<p>ಮೆಗಾಸ್ಟಾರ್ ಚಿರಂಜೀವಿ ಬರುತ್ತಾರೆಂದರೆ ಜನಸಂದಣಿಯಾಗುವುದು ಸಾಮಾನ್ಯ. ಆದರೆ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದ ಘಟನೆ ಬುಧವಾರ ಅನಂತಪುರದಲ್ಲಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಇಲ್ಲಿನ ಕಲಾ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಡ್ಪಾಧರ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.</p>.<p>ಚಿರಂಜೀವಿ–ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಅ.5ರಂದು ತೆಲುಗು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಪ್ರಚಾರದ ಭಾಗವಾಗಿ ಸಾರ್ವಜನಿಕವಾಗಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಮೆಗಾಸ್ಟಾರ್ ಆಗಮನಕ್ಕಾಗಿ 30 ಸಾವಿರಕ್ಕೂ ಅಧಿಕ ಜನರು ಮೈದಾನದಲ್ಲಿ ಕಾದು ನಿಂತಿದ್ದರು.</p>.<p>ಮೈದಾನದ ಸುತ್ತಲಿನ ಮನೆ ಮಹಡಿಗಳೆಲ್ಲ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಪೊಲೀಸರು ಬಿಗಿಭದ್ರತೆಯೊಂದಿಗೆ ಸಂಚಾರ ದಟ್ಟಣೆ ನಿಭಾಯಿಸಲು ಪರ್ಯಾಯ ವ್ಯವಸ್ಥೆ ರೂಪಿಸಿದ್ದರು.</p>.<p>ಬೆಂಗಳೂರಿನಿಂದ ಚಿರಂಜೀವಿ ಬರುವುದು ತುಸು ತಡವಾಗಿದ್ದು, ಗಂಟೆಗಳ ಕಾಲ ಸಾಕಷ್ಟು ಅಭಿಮಾನಿಗಳು ಕಾದು ನಿಂತಿದ್ದರು. ಪ್ರೇಕ್ಷಕರ ಮನತಣಿಸಲು ಹೆಸರಾಂತ ನೃತ್ಯ ಸಂಯೋಜಕರು ಮತ್ತು ತಂಡದಿಂದ ಡ್ಯಾನ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೆಗಾಸ್ಟಾರ್ ಆಗಮನವಾಗುತ್ತಿದ್ದಂತೆ ಜನ ಮುಗಿಬಿದ್ದು ನೆಚ್ಚಿನ ನಾಯಕನನ್ನು ನೋಡಿ ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೆಗಾಸ್ಟಾರ್ ಚಿರಂಜೀವಿ ಬರುತ್ತಾರೆಂದರೆ ಜನಸಂದಣಿಯಾಗುವುದು ಸಾಮಾನ್ಯ. ಆದರೆ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದ ಘಟನೆ ಬುಧವಾರ ಅನಂತಪುರದಲ್ಲಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಇಲ್ಲಿನ ಕಲಾ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಡ್ಪಾಧರ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.</p>.<p>ಚಿರಂಜೀವಿ–ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಅ.5ರಂದು ತೆಲುಗು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಪ್ರಚಾರದ ಭಾಗವಾಗಿ ಸಾರ್ವಜನಿಕವಾಗಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಮೆಗಾಸ್ಟಾರ್ ಆಗಮನಕ್ಕಾಗಿ 30 ಸಾವಿರಕ್ಕೂ ಅಧಿಕ ಜನರು ಮೈದಾನದಲ್ಲಿ ಕಾದು ನಿಂತಿದ್ದರು.</p>.<p>ಮೈದಾನದ ಸುತ್ತಲಿನ ಮನೆ ಮಹಡಿಗಳೆಲ್ಲ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಪೊಲೀಸರು ಬಿಗಿಭದ್ರತೆಯೊಂದಿಗೆ ಸಂಚಾರ ದಟ್ಟಣೆ ನಿಭಾಯಿಸಲು ಪರ್ಯಾಯ ವ್ಯವಸ್ಥೆ ರೂಪಿಸಿದ್ದರು.</p>.<p>ಬೆಂಗಳೂರಿನಿಂದ ಚಿರಂಜೀವಿ ಬರುವುದು ತುಸು ತಡವಾಗಿದ್ದು, ಗಂಟೆಗಳ ಕಾಲ ಸಾಕಷ್ಟು ಅಭಿಮಾನಿಗಳು ಕಾದು ನಿಂತಿದ್ದರು. ಪ್ರೇಕ್ಷಕರ ಮನತಣಿಸಲು ಹೆಸರಾಂತ ನೃತ್ಯ ಸಂಯೋಜಕರು ಮತ್ತು ತಂಡದಿಂದ ಡ್ಯಾನ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೆಗಾಸ್ಟಾರ್ ಆಗಮನವಾಗುತ್ತಿದ್ದಂತೆ ಜನ ಮುಗಿಬಿದ್ದು ನೆಚ್ಚಿನ ನಾಯಕನನ್ನು ನೋಡಿ ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>