ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಕಕ್ಕೆ ಹೋಗು ರಣಬೀರ್ ಕಪೂರ್ ಎಂದ ಉರ್ಫಿ– ಬಳಿಕ ಸ್ಪಷ್ಟನೆ

Last Updated 10 ಏಪ್ರಿಲ್ 2023, 11:22 IST
ಅಕ್ಷರ ಗಾತ್ರ

ಮುಂಬೈ: ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಸೊಶೀಯಲ್ ಮೀಡಿಯಾ ಇನ್‌ಪ್ಲ್ಯುಯೆನ್ಸರ್ ಉರ್ಫಿ ಜಾವೇದ್ ಅವರು ತಮ್ಮ ಉಡುಗೆ ಮತ್ತು ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಲ್ಲಿತ್ತಾರೆ.

ಇತ್ತೀಚೆಗೆ ರಣಬೀರ್ ಕಪೂರ್ ಅವರು, 'ಉರ್ಫಿ ಜಾವೇದ್ ಬಟ್ಟೆ ತೊಡುವ ರೀತಿಯನ್ನು ಕೆಟ್ಟ ಅಭಿರುಚಿ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಗರಂ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಉರ್ಫಿ, ನಿಮಗೆ ಇಷ್ಟವಾಗದಿದ್ದರೇ ರಣಬೀರ್ ಕಪೂರ್ ನೀವು ನರಕಕ್ಕೆ ಹೋಗಿ’ ಎಂದು ಕುಹಕವಾಡಿದ್ದರು. ಇದಕ್ಕೆ ರಣಬೀರ್ ಅಭಿಮಾನಿಗಳು ಉರ್ಫಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ನಂತರ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಉರ್ಫಿ, ‘ನಾನು ಆ ಅರ್ಥದಲ್ಲಿ ರಣಬೀರ್ ಕಪೂರ್ ಅವರಿಗೆ ಕಮೆಂಟ್ ಮಾಡಿಲ್ಲ. ಅದು ಹಾಸ್ಯಭರಿತವಾಗಿ ಹೇಳಿದ್ದಷ್ಟೇ. ಅವರು ನರಕಕ್ಕೆ ಹೋಗಬೇಕು ಎಂದು ನಾನು ಬಯಸುವುದಿಲ್ಲ’ ಎಂದಿದ್ದಾರೆ.

‘ನನಗೆ ಫ್ಯಾಷನ್‌ ಬಗ್ಗೆ ಆಸಕ್ತಿಯಿದ್ದು, ಆ ಕ್ಷೇತ್ರವನ್ನೇ ಆಯ್ದುಕೊಂಡೆ. ಬೇರೆಯವರ ಅಭಿಪ್ರಾಯಗಳಿಗೆ ನಾನು ಎಂದು ಬೆಲೆ ಕೊಡುವುದಿಲ್ಲ. ನಾನು ಬಟ್ಟೆ ಧರಿಸುವ ರೀತಿಗೆ ನನ್ನನ್ನು ಹಲವರು ಟ್ರೋಲ್‌ ಮಾಡಿದರು. ಆದರೆ, ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳದೇ ಮುಂದೆ ಸಾಗಿದೆ. ನಾನು ನನ್ನನ್ನು ಮತ್ತು ನನ್ನ ಆಯ್ಕೆಯನ್ನು ತುಂಬಾ ಗೌರವಿಸುತ್ತೇನೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT