<p>ಅಭಿಮಾನಿಗಳ ಮನಸಲ್ಲಿ ‘ದಾದಾ’ ಆಗಿ ಸ್ಥಾನಪಡೆದಿರುವ ವಿಷ್ಣುವರ್ಧನ್ ಹುಟ್ಟಿದ ದಿನ ಸೆ. 18. ವಿಷ್ಣು ಹುಟ್ಟಿದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅವರ ಕುಟುಂಬ ನಿರ್ಧರಿಸಿದೆ. ಇದರ ಭಾಗವಾಗಿ ಹಲವು ಸಂಘ– ಸಂಸ್ಥೆಗಳ ಸಹಯೋಗದೊಂದಿಗೆ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.</p>.<p>ವಿಷ್ಣು ಜನ್ಮದಿನದಂದು ನಗರದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಟ ಅನಿರುದ್ಧ್ ನಿರ್ದೇಶನದ ಕಿರುಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಾಗೆಯೇ ಸೆ. 14ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ‘ಸಂಗೀತ ಸುಧೆ– ಹೃದಯಗೀತೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಯಕ ನಟ/ನಟಿ, ಹಿನ್ನೆಲೆ ಗಾಯಕ/ ಗಾಯಕಿಯರೂ ಸೇರಿದಂತೆ ಚಿತ್ರರಂಗದ ಮೂವತ್ತು ಗಣ್ಯರು ವೇದಿಕೆಯ ಮೇಲಿದ್ದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಸಂಗೀತ ಕಾರ್ಯಕ್ರಮಕ್ಕೆ ಗೋಲ್ಡ್ ಪಾಸ್ ₹ 750, ಪ್ಲಾಟಿನಮ್ ಪಾಸ್ ₹ 1500 ಮತ್ತು ವಿಐಪಿ ಪಾಸ್ ₹ 2250 ಶುಲ್ಕ ನಿಗದಿಪಡಿಸಲಾಗಿದೆ.ಸಂಗ್ರಹವಾದ ಹಣವನ್ನು ಬಡ ಮಕ್ಕಳ ಹೃದಯಚಿಕಿತ್ಸೆಗೆ ವಿನಿಯೋಗಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಈ ಯೋಜನೆ ಈ ಕುರಿತು ಮಾಹಿತಿ ನೀಡಲೆಂದೇ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.</p>.<p>‘ನಾನು ಆರು ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದ್ದೇನೆ. ಅವು ವಸ್ತು, ನಿರ್ವಹಣೆ, ಜಾನರ್ ಎಲ್ಲದರಲ್ಲಿಯೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿದೆ. ಆದರೆ ಎಲ್ಲವೂ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಕಿರುಚಿತ್ರಗಳಾಗಿವೆ’ ಎಂದರು ಅನಿರುದ್ಧ್.</p>.<p>‘ವಿಭಾ ಚಾರಿಟೆಬಲ್ ಟ್ರಸ್ಟ್, ವಿಷ್ಣುವರ್ಧನ್ ಜನ್ಮದಿನವನ್ನು ಬಡ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಆಚರಿಸಲು ನಿರ್ಧರಿಸಿದೆ. ಈ ಪ್ರಯತ್ನಕ್ಕೆ ರೋಟರಿ ಕ್ಲಬ್, ‘ನೀಡಿ ಹಾರ್ಟ್ ಫೌಂಡೇಷನ್’ ಕೂಡ ಸಹಯೋಗ ಒದಗಿಸಿದೆ.</p>.<p>‘ನಮ್ಮ ಈ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗವೇ ಕೈಜೋಡಿಸುತ್ತಿದೆ. ಅದು ತುಂಬ ಖುಷಿಯ ವಿಷಯ. ಎಲ್ಲರೂ ಸಂತೋಷವಾಗಿರಬೇಕು. ಬಡ ಮಕ್ಕಳ ಮುಖದಲ್ಲಿ ನಗು ಅರಳಬೇಕು ಎನ್ನುವುದೇ ನಮ್ಮ ಮುಖ್ಯ ಆಶಯ’ ಎಂದರು ಭಾರತಿ ವಿಷ್ಣುವರ್ಧನ್.</p>.<p>ಇದೇ ಸಮಯದಲ್ಲಿ ಅವರು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಳಂಬದ ಕುರಿತೂ ಬೇಸರ ವ್ಯಕ್ತಪಡಿಸಿದರು. ‘ಇನ್ನೊಂದು ವರ್ಷ ಕಾಯುತ್ತೇನೆ. ಈ ಸಮಸ್ಯೆ ಬಗೆಹರಿದರೆ ಒಳ್ಳೆಯದು. ಬಗೆಹರಿದಿಲ್ಲ ಎಂದರೆ ನನ್ನ ಮನಸಲ್ಲೊಂದು ಯೋಜನೆ ಇದೆ. ಅದನ್ನು ಅಭಿಮಾನಿಗಳ ಮುಂದಿಟ್ಟು ಕಾರ್ಯರೂಪಕ್ಕೆ ತರುತ್ತೇವೆ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಭಿಮಾನಿಗಳ ಮನಸಲ್ಲಿ ‘ದಾದಾ’ ಆಗಿ ಸ್ಥಾನಪಡೆದಿರುವ ವಿಷ್ಣುವರ್ಧನ್ ಹುಟ್ಟಿದ ದಿನ ಸೆ. 18. ವಿಷ್ಣು ಹುಟ್ಟಿದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅವರ ಕುಟುಂಬ ನಿರ್ಧರಿಸಿದೆ. ಇದರ ಭಾಗವಾಗಿ ಹಲವು ಸಂಘ– ಸಂಸ್ಥೆಗಳ ಸಹಯೋಗದೊಂದಿಗೆ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.</p>.<p>ವಿಷ್ಣು ಜನ್ಮದಿನದಂದು ನಗರದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಟ ಅನಿರುದ್ಧ್ ನಿರ್ದೇಶನದ ಕಿರುಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಾಗೆಯೇ ಸೆ. 14ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ‘ಸಂಗೀತ ಸುಧೆ– ಹೃದಯಗೀತೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಯಕ ನಟ/ನಟಿ, ಹಿನ್ನೆಲೆ ಗಾಯಕ/ ಗಾಯಕಿಯರೂ ಸೇರಿದಂತೆ ಚಿತ್ರರಂಗದ ಮೂವತ್ತು ಗಣ್ಯರು ವೇದಿಕೆಯ ಮೇಲಿದ್ದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಸಂಗೀತ ಕಾರ್ಯಕ್ರಮಕ್ಕೆ ಗೋಲ್ಡ್ ಪಾಸ್ ₹ 750, ಪ್ಲಾಟಿನಮ್ ಪಾಸ್ ₹ 1500 ಮತ್ತು ವಿಐಪಿ ಪಾಸ್ ₹ 2250 ಶುಲ್ಕ ನಿಗದಿಪಡಿಸಲಾಗಿದೆ.ಸಂಗ್ರಹವಾದ ಹಣವನ್ನು ಬಡ ಮಕ್ಕಳ ಹೃದಯಚಿಕಿತ್ಸೆಗೆ ವಿನಿಯೋಗಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಈ ಯೋಜನೆ ಈ ಕುರಿತು ಮಾಹಿತಿ ನೀಡಲೆಂದೇ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.</p>.<p>‘ನಾನು ಆರು ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದ್ದೇನೆ. ಅವು ವಸ್ತು, ನಿರ್ವಹಣೆ, ಜಾನರ್ ಎಲ್ಲದರಲ್ಲಿಯೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿದೆ. ಆದರೆ ಎಲ್ಲವೂ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಕಿರುಚಿತ್ರಗಳಾಗಿವೆ’ ಎಂದರು ಅನಿರುದ್ಧ್.</p>.<p>‘ವಿಭಾ ಚಾರಿಟೆಬಲ್ ಟ್ರಸ್ಟ್, ವಿಷ್ಣುವರ್ಧನ್ ಜನ್ಮದಿನವನ್ನು ಬಡ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಆಚರಿಸಲು ನಿರ್ಧರಿಸಿದೆ. ಈ ಪ್ರಯತ್ನಕ್ಕೆ ರೋಟರಿ ಕ್ಲಬ್, ‘ನೀಡಿ ಹಾರ್ಟ್ ಫೌಂಡೇಷನ್’ ಕೂಡ ಸಹಯೋಗ ಒದಗಿಸಿದೆ.</p>.<p>‘ನಮ್ಮ ಈ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗವೇ ಕೈಜೋಡಿಸುತ್ತಿದೆ. ಅದು ತುಂಬ ಖುಷಿಯ ವಿಷಯ. ಎಲ್ಲರೂ ಸಂತೋಷವಾಗಿರಬೇಕು. ಬಡ ಮಕ್ಕಳ ಮುಖದಲ್ಲಿ ನಗು ಅರಳಬೇಕು ಎನ್ನುವುದೇ ನಮ್ಮ ಮುಖ್ಯ ಆಶಯ’ ಎಂದರು ಭಾರತಿ ವಿಷ್ಣುವರ್ಧನ್.</p>.<p>ಇದೇ ಸಮಯದಲ್ಲಿ ಅವರು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಳಂಬದ ಕುರಿತೂ ಬೇಸರ ವ್ಯಕ್ತಪಡಿಸಿದರು. ‘ಇನ್ನೊಂದು ವರ್ಷ ಕಾಯುತ್ತೇನೆ. ಈ ಸಮಸ್ಯೆ ಬಗೆಹರಿದರೆ ಒಳ್ಳೆಯದು. ಬಗೆಹರಿದಿಲ್ಲ ಎಂದರೆ ನನ್ನ ಮನಸಲ್ಲೊಂದು ಯೋಜನೆ ಇದೆ. ಅದನ್ನು ಅಭಿಮಾನಿಗಳ ಮುಂದಿಟ್ಟು ಕಾರ್ಯರೂಪಕ್ಕೆ ತರುತ್ತೇವೆ’ ಎಂದೂ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>