<p>ಅದು ‘ಯಾರ್ ಮಗ’ ಚಿತ್ರದ ಪ್ರಚಾರ ಕಾರ್ಯಕ್ರಮ. ಚಿತ್ರತಂಡ ನಾಯಕನ ಜನ್ಮದಿನದ ಆಚರಣೆಯ ಜೊತೆಗೆ ಇಪ್ಪತ್ತು ಕಲಾವಿದರ ಆಡಿಷನ್ಗೆ ತಯಾರಿ ಮಾಡಿಕೊಂಡೇ ಬಂದಿತ್ತು.</p>.<p>ಚಿತ್ರದ ನಿರ್ದೇಶಕ ಸುರೇಶ್ ರಾಜ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮೈಕ್ ಕೈಗೆತ್ತಿಕೊಂಡರು. ‘ತೊಂಬತ್ತರ ದಶಕದ ಕಥೆ ಇದು. ತಾಯಿ ಮತ್ತು ಮಗನ ಬಾಂಧವ್ಯದ ಮಹತ್ವ ಕುರಿತು ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ’ ಎಂದರು.</p>.<p>ಚಿತ್ರದಲ್ಲಿ ಶಿವಾಜಿನಗರದ ರಿಯಲ್ ರೌಡಿಗಳನ್ನು ತೋರಿಸಲು ನಿರ್ದೇಶಕರು ನಿರ್ಧರಿಸಿದ್ದಾರಂತೆ. ಆದರೆ, ಸುರಕ್ಷತೆ ದೃಷ್ಟಿಯಿಂದ ಅವರ ಹೆಸರುಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.</p>.<p>ವಿದ್ಯಾ ಪ್ರಭು ಈ ಚಿತ್ರದ ನಾಯಕಿ. ರಘು ಪಡುಕೋಟೆ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಾಯಿ ಪಾತ್ರದಲ್ಲಿ ಅಶ್ವಿನಿ ಗೌಡ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಮಂಗಳೂರು, ಮುಂಬೈ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.</p>.<p>ಛಾಯಾಗ್ರಹಣ ಸಿ.ಎಸ್. ಸತೀಶ್ ಅವರದು. ಲೋಕಿ ಸಂಗೀತ ಸಂಯೋಜಿಸಿದ್ದಾರೆ. ಎಂ. ಬಸವರಾಜ್ ಪಡುಕೋಟೆ ಬಂಡವಾಳ ಹೂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅದು ‘ಯಾರ್ ಮಗ’ ಚಿತ್ರದ ಪ್ರಚಾರ ಕಾರ್ಯಕ್ರಮ. ಚಿತ್ರತಂಡ ನಾಯಕನ ಜನ್ಮದಿನದ ಆಚರಣೆಯ ಜೊತೆಗೆ ಇಪ್ಪತ್ತು ಕಲಾವಿದರ ಆಡಿಷನ್ಗೆ ತಯಾರಿ ಮಾಡಿಕೊಂಡೇ ಬಂದಿತ್ತು.</p>.<p>ಚಿತ್ರದ ನಿರ್ದೇಶಕ ಸುರೇಶ್ ರಾಜ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮೈಕ್ ಕೈಗೆತ್ತಿಕೊಂಡರು. ‘ತೊಂಬತ್ತರ ದಶಕದ ಕಥೆ ಇದು. ತಾಯಿ ಮತ್ತು ಮಗನ ಬಾಂಧವ್ಯದ ಮಹತ್ವ ಕುರಿತು ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ’ ಎಂದರು.</p>.<p>ಚಿತ್ರದಲ್ಲಿ ಶಿವಾಜಿನಗರದ ರಿಯಲ್ ರೌಡಿಗಳನ್ನು ತೋರಿಸಲು ನಿರ್ದೇಶಕರು ನಿರ್ಧರಿಸಿದ್ದಾರಂತೆ. ಆದರೆ, ಸುರಕ್ಷತೆ ದೃಷ್ಟಿಯಿಂದ ಅವರ ಹೆಸರುಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.</p>.<p>ವಿದ್ಯಾ ಪ್ರಭು ಈ ಚಿತ್ರದ ನಾಯಕಿ. ರಘು ಪಡುಕೋಟೆ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಾಯಿ ಪಾತ್ರದಲ್ಲಿ ಅಶ್ವಿನಿ ಗೌಡ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಮಂಗಳೂರು, ಮುಂಬೈ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ.</p>.<p>ಛಾಯಾಗ್ರಹಣ ಸಿ.ಎಸ್. ಸತೀಶ್ ಅವರದು. ಲೋಕಿ ಸಂಗೀತ ಸಂಯೋಜಿಸಿದ್ದಾರೆ. ಎಂ. ಬಸವರಾಜ್ ಪಡುಕೋಟೆ ಬಂಡವಾಳ ಹೂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>