<p>ಕನ್ನಡ ಚಿತ್ರವೊಂದಕ್ಕಾಗಿ ಕಾಲಿವುಡ್ ನಟ ಗಣೇಶ್ ವೆಂಕಟರಾಮನ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಅಂದಹಾಗೆ, ಇವರನ್ನು ಕನ್ನಡಕ್ಕೆ ಕರೆತಂದಿರುವುದು `ಚಂದ್ರ~ ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್. ಗಣೇಶ್ ಈ ಚಿತ್ರದಲ್ಲಿ ಶ್ರೇಯಾ ಶರಣ್ ಅವರಿಗೆ ಎರಡನೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ. <br /> <br /> ಕಾಲಿವುಡ್ನಿಂದ ಸ್ಯಾಂಡಲ್ವುಡ್ಗೆ ಕಾಲಿಡುತ್ತಿರುವ ಗಣೇಶ್ ಕಟ್ಟುಮಸ್ತು ಹುಡುಗ. ತಮಿಳು ಚಿತ್ರರಂಗದ ಸ್ಫುರದ್ರೂಪಿ ಹೀರೋಗಳಲ್ಲಿ ಒಬ್ಬರು. ಫೈಟ್ ಮತ್ತು ಡ್ಯಾನ್ಸ್ ಮಾಡುವುದರಲ್ಲಿ ಪಂಟರ್. ಇಂಥ ಹುಡುಗ ಕನ್ನಡ ಪ್ರೇಕ್ಷಕರನ್ನು ಮೋಡಿ ಮಾಡಲು ಬರುತ್ತಿದ್ದಾರೆ. <br /> <br /> ಅಂದುಕೊಂಡಂತೆ ಆಗಿದ್ದರೆ ಗಣೇಶ್ ಕನ್ನಡ ಚಿತ್ರದಲ್ಲಿ ನಟಿಸಿ ಹಲವು ವರ್ಷಗಳಾಗಿರುತ್ತಿತ್ತು. ತಮಿಳಿನಲ್ಲಿ ತೆರೆ ಕಂಡು, ಯಶಸ್ಸು ಪಡೆದ `ಅಭಿಯುಂ ನಾನುಂ~ ಚಿತ್ರವನ್ನು ಕನ್ನಡಕ್ಕೆ (ನಾನು ನನ್ನ ಕನಸು) ರಿಮೇಕ್ ಮಾಡುವಾಗ, ಆ ಚಿತ್ರದಲ್ಲಿ ನಟಿಸುವಂತೆ ಗಣೇಶ್ಗೆ ಪ್ರಕಾಶ್ ರಾಜ್ ಆಫರ್ ಇಟ್ಟಿದ್ದರು. ಆದರೆ, ಗಣೇಶ್ಗೆ ಆ ಸಂದರ್ಭದಲ್ಲಿ ಚಿತ್ರಕ್ಕೆ ಡೇಟ್ಸ್ ಹೊಂದಾಣಿಕೆ ಮಾಡುವುದು ಕಷ್ಟವಾಗಿದ್ದರಿಂದ ಅವರು ಹಿಂದೆ ಸರಿದಿದ್ದರು. <br /> <br /> ಅಂದಹಾಗೆ, ರೂಪಾ ಅಯ್ಯರ್ `ಚಂದ್ರ~ ಚಿತ್ರದ ಈ ಪಾತ್ರಕ್ಕೆ ಮೊದಲಿಗೆ ಶ್ರೀಶಾಂತ್ ಅವರನ್ನು ಕರೆತರಬೇಕು ಎಂದು ಬಯಸಿದ್ದರಂತೆ. ಈ ಕುರಿತು ಮಾತುಕತೆ ಕೂಡ ನಡೆದಿತ್ತು. ಆದರೆ, ಶ್ರೀಶಾಂತ್ ಅವಕಾಶವನ್ನು ತಿರಸ್ಕರಿಸಿದ್ದರಿಂದ ಆ ಜಾಗಕ್ಕೆ ಗಣೇಶ್ ಅವರನ್ನು ಕರೆತರಲಾಗಿದೆ. `ಚಂದ್ರ~ ಚಿತ್ರ ಕನ್ನಡ ಮತ್ತು ತಮಿಳು ಎರಡರಲ್ಲೂ ತೆರೆಕಾಣಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡ ಚಿತ್ರವೊಂದಕ್ಕಾಗಿ ಕಾಲಿವುಡ್ ನಟ ಗಣೇಶ್ ವೆಂಕಟರಾಮನ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಅಂದಹಾಗೆ, ಇವರನ್ನು ಕನ್ನಡಕ್ಕೆ ಕರೆತಂದಿರುವುದು `ಚಂದ್ರ~ ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್. ಗಣೇಶ್ ಈ ಚಿತ್ರದಲ್ಲಿ ಶ್ರೇಯಾ ಶರಣ್ ಅವರಿಗೆ ಎರಡನೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರಂತೆ. <br /> <br /> ಕಾಲಿವುಡ್ನಿಂದ ಸ್ಯಾಂಡಲ್ವುಡ್ಗೆ ಕಾಲಿಡುತ್ತಿರುವ ಗಣೇಶ್ ಕಟ್ಟುಮಸ್ತು ಹುಡುಗ. ತಮಿಳು ಚಿತ್ರರಂಗದ ಸ್ಫುರದ್ರೂಪಿ ಹೀರೋಗಳಲ್ಲಿ ಒಬ್ಬರು. ಫೈಟ್ ಮತ್ತು ಡ್ಯಾನ್ಸ್ ಮಾಡುವುದರಲ್ಲಿ ಪಂಟರ್. ಇಂಥ ಹುಡುಗ ಕನ್ನಡ ಪ್ರೇಕ್ಷಕರನ್ನು ಮೋಡಿ ಮಾಡಲು ಬರುತ್ತಿದ್ದಾರೆ. <br /> <br /> ಅಂದುಕೊಂಡಂತೆ ಆಗಿದ್ದರೆ ಗಣೇಶ್ ಕನ್ನಡ ಚಿತ್ರದಲ್ಲಿ ನಟಿಸಿ ಹಲವು ವರ್ಷಗಳಾಗಿರುತ್ತಿತ್ತು. ತಮಿಳಿನಲ್ಲಿ ತೆರೆ ಕಂಡು, ಯಶಸ್ಸು ಪಡೆದ `ಅಭಿಯುಂ ನಾನುಂ~ ಚಿತ್ರವನ್ನು ಕನ್ನಡಕ್ಕೆ (ನಾನು ನನ್ನ ಕನಸು) ರಿಮೇಕ್ ಮಾಡುವಾಗ, ಆ ಚಿತ್ರದಲ್ಲಿ ನಟಿಸುವಂತೆ ಗಣೇಶ್ಗೆ ಪ್ರಕಾಶ್ ರಾಜ್ ಆಫರ್ ಇಟ್ಟಿದ್ದರು. ಆದರೆ, ಗಣೇಶ್ಗೆ ಆ ಸಂದರ್ಭದಲ್ಲಿ ಚಿತ್ರಕ್ಕೆ ಡೇಟ್ಸ್ ಹೊಂದಾಣಿಕೆ ಮಾಡುವುದು ಕಷ್ಟವಾಗಿದ್ದರಿಂದ ಅವರು ಹಿಂದೆ ಸರಿದಿದ್ದರು. <br /> <br /> ಅಂದಹಾಗೆ, ರೂಪಾ ಅಯ್ಯರ್ `ಚಂದ್ರ~ ಚಿತ್ರದ ಈ ಪಾತ್ರಕ್ಕೆ ಮೊದಲಿಗೆ ಶ್ರೀಶಾಂತ್ ಅವರನ್ನು ಕರೆತರಬೇಕು ಎಂದು ಬಯಸಿದ್ದರಂತೆ. ಈ ಕುರಿತು ಮಾತುಕತೆ ಕೂಡ ನಡೆದಿತ್ತು. ಆದರೆ, ಶ್ರೀಶಾಂತ್ ಅವಕಾಶವನ್ನು ತಿರಸ್ಕರಿಸಿದ್ದರಿಂದ ಆ ಜಾಗಕ್ಕೆ ಗಣೇಶ್ ಅವರನ್ನು ಕರೆತರಲಾಗಿದೆ. `ಚಂದ್ರ~ ಚಿತ್ರ ಕನ್ನಡ ಮತ್ತು ತಮಿಳು ಎರಡರಲ್ಲೂ ತೆರೆಕಾಣಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>