<p>`ಅಣ್ಣಾ ಬಾಂಡ್~ ಚಿತ್ರದ ನಂತರ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರ `ಯಾರೇ ಕೂಗಾಡಲಿ~ ಸೆಟ್ಟೇರಿದೆ. ಪುನೀತ್ ಅವರೊಂದಿಗೆ ನಟ ಯೋಗೀಶ್ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. <br /> <br /> ಕಳೆದ ವಾರ ಬೆಂಗಳೂರಿನ ಸದಾಶಿವನಗರದ ರಾಜಕುಮಾರ್ ನಿವಾಸದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಪಾರ್ವತಮ್ಮ ರಾಜಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದ ಆರಂಭಿಕ ದೃಶ್ಯಕ್ಕೆ ನಟ ರವಿಚಂದ್ರನ್ ಆರಂಭ ಫಲಕ ತೋರಿಸಿದರು. <br /> <br /> `ಯಾರೇ ಕೂಗಾಡಲಿ~ ತಮಿಳಿನ `ಪೊರಾಲಿ~ ಚಿತ್ರದ ರೀಮೇಕ್. ಮೂಲ ಚಿತ್ರದ ನಿರ್ದೇಶಕರಾದ ಸಮುದ್ರಖಣಿ ಅವರೇ ಕನ್ನಡದ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯೂ ಅವರದ್ದೇ.<br /> <br /> ಗುರುಪ್ರಸಾದ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಸುಕುಮಾರ್ ಛಾಯಾಗ್ರಹಣ ಹಾಗೂ ರವಿವರ್ಮರ ಸಾಹಸ `ಯಾರೇ ಕೂಗಾಡಲಿ~ ಚಿತ್ರಕ್ಕಿದೆ.ನಿರ್ಮಾಪಕರಾದ ಎಸ್.ಎ. ಗೋವಿಂದರಾಜ್, ರಾಕ್ಲೈನ್ ವೆಂಕಟೇಶ್, ಕೆ. ಮಂಜು, ಶ್ರೀಕಾಂತ್, ಟಿ.ಸಿ. ಸಿದ್ಧರಾಜು ಹಾಗೂ ಕೈಗಾರಿಕೋದ್ಯಮಿ ಜಿ.ಪಿ. ನಾರಾಯಣಸ್ವಾಮಿ, ನಿರ್ದೇಶಕರಾದ ಎಂ.ಎಸ್. ರಾಜಶೇಖರ್, ಮಾದೇಶ್, ಸೂರಿ, ಮುಂತಾದವರು `ಯಾರೇ ಕೂಗಾಡಲಿ~ ಮುಹೂರ್ತ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರದ ಚಿತ್ರೀಕರಣವು ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಅಣ್ಣಾ ಬಾಂಡ್~ ಚಿತ್ರದ ನಂತರ ಪುನೀತ್ ರಾಜಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರ `ಯಾರೇ ಕೂಗಾಡಲಿ~ ಸೆಟ್ಟೇರಿದೆ. ಪುನೀತ್ ಅವರೊಂದಿಗೆ ನಟ ಯೋಗೀಶ್ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. <br /> <br /> ಕಳೆದ ವಾರ ಬೆಂಗಳೂರಿನ ಸದಾಶಿವನಗರದ ರಾಜಕುಮಾರ್ ನಿವಾಸದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಪಾರ್ವತಮ್ಮ ರಾಜಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದ ಆರಂಭಿಕ ದೃಶ್ಯಕ್ಕೆ ನಟ ರವಿಚಂದ್ರನ್ ಆರಂಭ ಫಲಕ ತೋರಿಸಿದರು. <br /> <br /> `ಯಾರೇ ಕೂಗಾಡಲಿ~ ತಮಿಳಿನ `ಪೊರಾಲಿ~ ಚಿತ್ರದ ರೀಮೇಕ್. ಮೂಲ ಚಿತ್ರದ ನಿರ್ದೇಶಕರಾದ ಸಮುದ್ರಖಣಿ ಅವರೇ ಕನ್ನಡದ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯೂ ಅವರದ್ದೇ.<br /> <br /> ಗುರುಪ್ರಸಾದ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಸುಕುಮಾರ್ ಛಾಯಾಗ್ರಹಣ ಹಾಗೂ ರವಿವರ್ಮರ ಸಾಹಸ `ಯಾರೇ ಕೂಗಾಡಲಿ~ ಚಿತ್ರಕ್ಕಿದೆ.ನಿರ್ಮಾಪಕರಾದ ಎಸ್.ಎ. ಗೋವಿಂದರಾಜ್, ರಾಕ್ಲೈನ್ ವೆಂಕಟೇಶ್, ಕೆ. ಮಂಜು, ಶ್ರೀಕಾಂತ್, ಟಿ.ಸಿ. ಸಿದ್ಧರಾಜು ಹಾಗೂ ಕೈಗಾರಿಕೋದ್ಯಮಿ ಜಿ.ಪಿ. ನಾರಾಯಣಸ್ವಾಮಿ, ನಿರ್ದೇಶಕರಾದ ಎಂ.ಎಸ್. ರಾಜಶೇಖರ್, ಮಾದೇಶ್, ಸೂರಿ, ಮುಂತಾದವರು `ಯಾರೇ ಕೂಗಾಡಲಿ~ ಮುಹೂರ್ತ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರದ ಚಿತ್ರೀಕರಣವು ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>