<p>ದರ್ಶನ್ ಬರುತ್ತಾರೆಂದು ನಿರೀಕ್ಷಿಸಲಾಗಿತ್ತು. ಅವರು ಬರಲಿಲ್ಲ. ಬಂದವರು, ದರ್ಶನ್ ಪತ್ನಿ ವಿಜಯಲಕ್ಷ್ಮಿ. ನಿರ್ಮಾಪಕ ಭಾ.ಮ. ಹರೀಶ್ ತಮ್ಮ `ಉಲ್ಲಾಸ್ ಕ್ರಿಯೇಷನ್ಸ್~ಗೆ ಹತ್ತು ವರ್ಷ ತುಂಬಿದ ನೆನಪಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮ.<br /> <br /> `ದಶಕದ ದರ್ಶನ - ಸತ್ಯ ಉಲ್ಲಾಸ~ ಎನ್ನುವುದು ಕಾರ್ಯಕ್ರಮದ ಶೀರ್ಷಿಕೆ. 2002ರಿಂದ ಈವರೆಗೆ `ಉಲ್ಲಾಸ್ ಕ್ರಿಯೇಷನ್ಸ್~ ಸಾಗಿಬಂದ ಹಾದಿಯಲ್ಲಿ ಜೊತೆಯಾದವರನ್ನು ಅಭಿನಂದಿಸಲು ಹರೀಶ್ ಕಾರ್ಯಕ್ರಮ ಏರ್ಪಡಿಸಿದ್ದರು.<br /> <br /> ಅವರ ನಿರ್ಮಾಣದ ಚೊಚ್ಚಿಲ ಚಿತ್ರ `ಮೆಜೆಸ್ಟಿಕ್~ನ ನಾಯಕನಟ ದರ್ಶನ್ ಅವರಿಗೆ ಅಭಿನಂದನೆ ಎಂದೇ ಕಾರ್ಯಕ್ರಮವನ್ನು ಬಿಂಬಿಸಲಾಗಿತ್ತು. ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಗೌರವ ಸ್ವೀಕರಿಸಿದರು.<br /> <br /> `ಸಾಧಾರಣ ತರುಣನಾಗಿದ್ದ ದರ್ಶನ್ ಅವರ ಬದುಕಿನಲ್ಲಿ `ಮೆಜೆಸ್ಟಿಕ್~ ಚಿತ್ರ ಹೊಸ ತಿರುವು ನೀಡಿತು. ಅದಕ್ಕಾಗಿ ಉಲ್ಲಾಸ್ ಕ್ರಿಯೇಷನ್ಸ್ಗೆ ನಮ್ಮ ಕುಟುಂಬ ಋಣಿಯಾಗಿದೆ~ ಎಂದು ವಿಜಯಲಕ್ಷ್ಮಿ ಹೇಳಿದರು.<br /> <br /> `ಮೆಜೆಸ್ಟಿಕ್~ನ ನಿರ್ದೇಶಕ ಪಿ.ಎನ್. ಸತ್ಯ ಅವರನ್ನು ಕೂಡ `ಉಲ್ಲಾಸ್~ ಬಳಗ ಗೌರವಿಸಿತು. ಹರೀಶ್ ನಿರ್ಮಾಣದ ಮತ್ತೊಂದು ಚಿತ್ರ `ಶಿಷ್ಯ~ದ ನಿರ್ದೇಶಕ ವಿಕ್ಟರಿ ವಾಸು ಕೂಡ ಅಭಿನಂದಿತರಲ್ಲಿ ಸೇರಿದ್ದರು. <br /> <br /> ಹತ್ತು ವರ್ಷಗಳ ಹಿಂದಿನ ಗೆಲುವನ್ನು ನೆನಪಿಸಿಕೊಂಡ ನಿರ್ದೇಶಕ ಸತ್ಯ, `ಹತ್ತು ವರ್ಷಗಳ ಹಿಂದೆ ನಾನು ಹೇಳಿದ ಕಥೆಯನ್ನು ನೆಚ್ಚಿಕೊಂಡು ಹರೀಶ್ ಅವಕಾಶ ನೀಡಿದರು. ನನ್ನ ತಂದೆಯಂತೆ ಕೈಹಿಡಿದು ಬೆಂಬಲಿಸಿದರು. ಅವರನ್ನು ಎಂದಿಗೂ ಮರೆಯಲಾರೆ. ಈಗ ಅವರಿಂದ ಮತ್ತೊಂದು ಅವಕಾಶ ನಿರೀಕ್ಷಿಸುತ್ತಿರುವೆ~ ಎಂದು ಮಾತಿನಲ್ಲೇ ಧನ್ಯವಾದ ಸಮರ್ಪಣೆಯೊಂದಿಗೆ ಮನವಿ ಪತ್ರವನ್ನೂ ಸಲ್ಲಿಸಿದರು. <br /> <br /> ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಸಾ.ರಾ. ಗೋವಿಂದ್, ಥಾಮಸ್ ಡಿಸೋಜ, ಹಂಚಿಕೆದಾರ ಪ್ರಸಾದ್, ನಟ ದೀಪಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ಮಾಪಕರು ಗೆಲ್ಲಬೇಕಾದ ಅನಿವಾರ್ಯತೆಯ ಬಗ್ಗೆ ಗೋವಿಂದು ಭಾವುಕತೆಯಿಂದ ಮಾತನಾಡಿದರು. <br /> <br /> `ನಿರ್ಮಾಪಕರು ಗೆದ್ದರೆ ಚಿತ್ರೋದ್ಯಮ ಉಳಿಯುತ್ತದೆ~ ಎಂದ ಅವರು, ಭಾ.ಮ.ಹರೀಶ್ `ಗಟ್ಟಿ ನಿರ್ಮಾಪಕ~ರಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. `ಮೆಜೆಸ್ಟಿಕ್~, `ಶಿಷ್ಯ~ ಚಿತ್ರಗಳ ನಂತರ ಇದೀಗ `ಮಾಗಡಿ~ ಎನ್ನುವ ಚಿತ್ರವನ್ನು ಹರೀಶ್ ನಿರ್ಮಿಸಿದ್ದಾರೆ. <br /> <br /> `ಶಿಷ್ಯ~ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ದೀಪಕ್ `ಮಾಗಡಿ~ಯಲ್ಲೂ ನಾಯಕ. `ಉಲ್ಲಾಸ~ ಮುಂದುವರೆಯಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಂಧುಮಿತ್ರರು ಹಾರೈಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದರ್ಶನ್ ಬರುತ್ತಾರೆಂದು ನಿರೀಕ್ಷಿಸಲಾಗಿತ್ತು. ಅವರು ಬರಲಿಲ್ಲ. ಬಂದವರು, ದರ್ಶನ್ ಪತ್ನಿ ವಿಜಯಲಕ್ಷ್ಮಿ. ನಿರ್ಮಾಪಕ ಭಾ.ಮ. ಹರೀಶ್ ತಮ್ಮ `ಉಲ್ಲಾಸ್ ಕ್ರಿಯೇಷನ್ಸ್~ಗೆ ಹತ್ತು ವರ್ಷ ತುಂಬಿದ ನೆನಪಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮ.<br /> <br /> `ದಶಕದ ದರ್ಶನ - ಸತ್ಯ ಉಲ್ಲಾಸ~ ಎನ್ನುವುದು ಕಾರ್ಯಕ್ರಮದ ಶೀರ್ಷಿಕೆ. 2002ರಿಂದ ಈವರೆಗೆ `ಉಲ್ಲಾಸ್ ಕ್ರಿಯೇಷನ್ಸ್~ ಸಾಗಿಬಂದ ಹಾದಿಯಲ್ಲಿ ಜೊತೆಯಾದವರನ್ನು ಅಭಿನಂದಿಸಲು ಹರೀಶ್ ಕಾರ್ಯಕ್ರಮ ಏರ್ಪಡಿಸಿದ್ದರು.<br /> <br /> ಅವರ ನಿರ್ಮಾಣದ ಚೊಚ್ಚಿಲ ಚಿತ್ರ `ಮೆಜೆಸ್ಟಿಕ್~ನ ನಾಯಕನಟ ದರ್ಶನ್ ಅವರಿಗೆ ಅಭಿನಂದನೆ ಎಂದೇ ಕಾರ್ಯಕ್ರಮವನ್ನು ಬಿಂಬಿಸಲಾಗಿತ್ತು. ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಗೌರವ ಸ್ವೀಕರಿಸಿದರು.<br /> <br /> `ಸಾಧಾರಣ ತರುಣನಾಗಿದ್ದ ದರ್ಶನ್ ಅವರ ಬದುಕಿನಲ್ಲಿ `ಮೆಜೆಸ್ಟಿಕ್~ ಚಿತ್ರ ಹೊಸ ತಿರುವು ನೀಡಿತು. ಅದಕ್ಕಾಗಿ ಉಲ್ಲಾಸ್ ಕ್ರಿಯೇಷನ್ಸ್ಗೆ ನಮ್ಮ ಕುಟುಂಬ ಋಣಿಯಾಗಿದೆ~ ಎಂದು ವಿಜಯಲಕ್ಷ್ಮಿ ಹೇಳಿದರು.<br /> <br /> `ಮೆಜೆಸ್ಟಿಕ್~ನ ನಿರ್ದೇಶಕ ಪಿ.ಎನ್. ಸತ್ಯ ಅವರನ್ನು ಕೂಡ `ಉಲ್ಲಾಸ್~ ಬಳಗ ಗೌರವಿಸಿತು. ಹರೀಶ್ ನಿರ್ಮಾಣದ ಮತ್ತೊಂದು ಚಿತ್ರ `ಶಿಷ್ಯ~ದ ನಿರ್ದೇಶಕ ವಿಕ್ಟರಿ ವಾಸು ಕೂಡ ಅಭಿನಂದಿತರಲ್ಲಿ ಸೇರಿದ್ದರು. <br /> <br /> ಹತ್ತು ವರ್ಷಗಳ ಹಿಂದಿನ ಗೆಲುವನ್ನು ನೆನಪಿಸಿಕೊಂಡ ನಿರ್ದೇಶಕ ಸತ್ಯ, `ಹತ್ತು ವರ್ಷಗಳ ಹಿಂದೆ ನಾನು ಹೇಳಿದ ಕಥೆಯನ್ನು ನೆಚ್ಚಿಕೊಂಡು ಹರೀಶ್ ಅವಕಾಶ ನೀಡಿದರು. ನನ್ನ ತಂದೆಯಂತೆ ಕೈಹಿಡಿದು ಬೆಂಬಲಿಸಿದರು. ಅವರನ್ನು ಎಂದಿಗೂ ಮರೆಯಲಾರೆ. ಈಗ ಅವರಿಂದ ಮತ್ತೊಂದು ಅವಕಾಶ ನಿರೀಕ್ಷಿಸುತ್ತಿರುವೆ~ ಎಂದು ಮಾತಿನಲ್ಲೇ ಧನ್ಯವಾದ ಸಮರ್ಪಣೆಯೊಂದಿಗೆ ಮನವಿ ಪತ್ರವನ್ನೂ ಸಲ್ಲಿಸಿದರು. <br /> <br /> ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಸಾ.ರಾ. ಗೋವಿಂದ್, ಥಾಮಸ್ ಡಿಸೋಜ, ಹಂಚಿಕೆದಾರ ಪ್ರಸಾದ್, ನಟ ದೀಪಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರ್ಮಾಪಕರು ಗೆಲ್ಲಬೇಕಾದ ಅನಿವಾರ್ಯತೆಯ ಬಗ್ಗೆ ಗೋವಿಂದು ಭಾವುಕತೆಯಿಂದ ಮಾತನಾಡಿದರು. <br /> <br /> `ನಿರ್ಮಾಪಕರು ಗೆದ್ದರೆ ಚಿತ್ರೋದ್ಯಮ ಉಳಿಯುತ್ತದೆ~ ಎಂದ ಅವರು, ಭಾ.ಮ.ಹರೀಶ್ `ಗಟ್ಟಿ ನಿರ್ಮಾಪಕ~ರಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು. `ಮೆಜೆಸ್ಟಿಕ್~, `ಶಿಷ್ಯ~ ಚಿತ್ರಗಳ ನಂತರ ಇದೀಗ `ಮಾಗಡಿ~ ಎನ್ನುವ ಚಿತ್ರವನ್ನು ಹರೀಶ್ ನಿರ್ಮಿಸಿದ್ದಾರೆ. <br /> <br /> `ಶಿಷ್ಯ~ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ದೀಪಕ್ `ಮಾಗಡಿ~ಯಲ್ಲೂ ನಾಯಕ. `ಉಲ್ಲಾಸ~ ಮುಂದುವರೆಯಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಂಧುಮಿತ್ರರು ಹಾರೈಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>